ಛತ್ತೀಸ್ಗಢದಲ್ಲಿ ಐವರು ನಕ್ಸಲರ ಹತ್ಯೆ
Team Udayavani, Aug 24, 2019, 3:11 PM IST
ರಾಂಚಿ:ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಐವರು ನಕ್ಸಲರನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ.
ಇಲ್ಲಿನ ಅಭುಜಮಾದ್ ಅರಣ್ಯವಲಯದಲ್ಲಿ ನಕ್ಸಲರನ್ನು ತೆರವುಗೊಳಿಸಲು ಎನ್ಕೌಂಟರ್ ನಡೆದಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರಿಗೆ ಏಟಾಗಿದೆ ಎಂದು ಹೇಳಲಾಗಿದ್ದು, ಸ್ಥಳದಲ್ಲೀಗ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.