ಶಾಸಕ ಪ್ರಭು ವಿವಾಹ ಜಟಾಪಟಿ: ಅರ್ಜಿ ಇತ್ಯರ್ಥಗೊಳಿಸಿದ ಮದ್ರಾಸ್ ಹೈಕೋರ್ಟ್
ಇದೇ ಸಂದರ್ಭದಲ್ಲಿ ತಂದೆಯ ಬಳಿ ಮಾತನಾಡಲು ಸೌಂದರ್ಯಾಗೆ ಅವಕಾಶ ಮಾಡಿಕೊಡಲಾಯಿತು.
Team Udayavani, Oct 10, 2020, 10:16 AM IST
ಚೆನ್ನೈ: ಎಐಎಎಡಿಎಂಕೆ ಶಾಸಕ ಎ.ಪ್ರಭು ವಿವಾಹ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಶಾಸಕ ತನ್ನ ಮಗಳನ್ನು
ಅಪಹರಣ ಮಾಡಿದ್ದು, ಅವಳನ್ನು ಹುಡುಕಿಕೊಡಬೇಕು ಎಂದು ಕೋರಿ ಶಾಸಕನ ಪತ್ನಿ ಸೌಂದರ್ಯಾ ಅವರ ತಂದೆ ಸ್ವಾಮಿನಾಥನ್ ಹೇಬಿ ಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಕೋರ್ಟ್ ಹಾಲ್ನಲ್ಲಿ ಹಾಜರಿದ್ದ ಸೌಂದರ್ಯಾ, ತಾನು ಪತಿಯ ಜತೆಗೇ ಇರಲು ಬಯಸುವುದಾಗಿ ಮತ್ತು ತನ್ನನ್ನು ಯಾರೂ ಅಪಹರಿಸಲಿಲ್ಲ ಎಂದು ಅರಿಕೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ತಂದೆಯ ಬಳಿ ಮಾತನಾಡಲು ಸೌಂದರ್ಯಾಗೆ ಅವಕಾಶ ಮಾಡಿಕೊಡಲಾಯಿತು.
ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ಹೈಕೋರ್ಟ್, ಸೌಂದರ್ಯಾ ಅವರಿಗೆ ಪತಿಯೊಂದಿಗೆ ಹೋಗಲು ಅನುಮತಿ ನೀಡಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಕ್ಲಾಟ್ ರದ್ದತಿಗೆ ಸುಪ್ರೀಂ ನಕಾರ
ಕಾನೂನು ವ್ಯಾಸಂಗ ಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀ ಕ್ಷೆ ಕಾಮನ್ ಲಾ ಅಡ್ಮಿ ಷನ್ ಟೆಸ್ಟ್ನ (ಕ್ಲಾಟ್) ಈ ವರ್ಷದ ಪರೀಕ್ಷೆಯನ್ನು ರದ್ದುಗೊಳಿ ಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ, ಕ್ಲಾಟ್ ಪರೀಕ್ಷೆ ಜರಗಿ ದರೂ ಸೀಟು ಹಂಚಿಕೆ ಕೌನ್ಸೆ ಲಿಂಗ್ ಪ್ರಕ್ರಿಯೆಯನ್ನಾ ದರೂ ತಡೆಯಲು ಆದೇಶಿಸಬೇಕು ಎಂದು ಕೇಳಲಾಗಿದ್ದ ಮನವಿಯನ್ನೂ ತಿರಸ್ಕರಿಸಲಾಗಿದೆ.
ದೇಶದ 23 ರಾಷ್ಟ್ರೀಯ ಕಾನೂನು ವಿವಿಗಳ ಕೋರ್ಸ್ ಗಳ ದಾಖಲಾತಿಗಾಗಿ ಸೆ. 28ರಂದು ಕ್ಲಾಟ್ ಪರೀಕ್ಷೆ ನಡೆದಿದೆ. ಆ ಪರೀಕ್ಷೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದ ಹಿನ್ನೆ ಲೆಯಲ್ಲಿ ಇಡೀ ಪರೀಕ್ಷೆ ರದ್ದುಗೊಳಿಸಬೇಕೆಂದು ಹಿರಿಯ ವಕೀಲ ಶಂಕರನಾರಾಯಣನ್ ಅವರು ಮನವಿ ಸಲ್ಲಿ ಸಿ ದ್ದರು. ಇದಕ್ಕೆ ಉತ್ತರಿಸಿರುವ ನ್ಯಾಯಪೀಠ, ಪರೀಕ್ಷೆ ಬಗೆಗಿನ ದೋಷಗಳನ್ನು ಪಟ್ಟಿ ಮಾಡಿ 2 ದಿನಗ ಳೊಳಗೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Controversy: ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತದಾನ; ವಿವಾದಿತ ವಿಡಿಯೋ ವೈರಲ್
MUST WATCH
ಹೊಸ ಸೇರ್ಪಡೆ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ