ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?
Team Udayavani, Jan 16, 2021, 7:20 AM IST
ಯಾಕೆ ಕೋವಿಡ್ ಲಸಿಕೆ? :
ದೇಹದಲ್ಲಿ ರೋಗ ಪ್ರತಿಕಾಯಗಳನ್ನು ಹೆಚ್ಚಿಸುವ ಕಾರ ಣಕ್ಕೆ ಲಸಿಕೆ ನೀಡಲಾಗುತ್ತದೆ. ಇದು ಸೋಂಕಿತರ ಚಿಕಿತ್ಸೆಗಾಗಿ ನೀಡುವ ಔಷಧವಲ್ಲ.
ಯಾರಿಗೆ, ಎಷ್ಟು ಮಂದಿಗೆ ಲಸಿಕೆ? :
ಆರಂಭ ದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ. ಮೊದಲ ಲಸಿಕೆಯನ್ನು ಆಸ್ಪತ್ರೆಗಳ ಸ್ವತ್ಛತಾ/ ಡಿ ಗ್ರೂಪ್ ಸಿಬಂದಿಗೆ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ರಾಜ್ಯದಲ್ಲಿ 7.4 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಣಿಯಾಗಿದ್ದಾರೆ.
ಎಲ್ಲಿ ವಿತರಣೆ? :
ರಾಜ್ಯದ ಸರಕಾರಿ, ಖಾಸಗಿ ಆರೋಗ್ಯ ಕೇಂದ್ರ ಸೇರಿ ಒಟ್ಟು 242 ಕಡೆ ಶನಿವಾರ ಲಸಿಕೆ ವಿತರಿಸಲಾಗುತ್ತಿದೆ. ಅನಂತರ 2000ಕ್ಕೂ ಹೆಚ್ಚು ಕಡೆಗಳಲ್ಲಿ ಲಸಿಕೆ ವಿತರಣೆ ಕಾರ್ಯನಡೆಯಲಿದೆ.
ಜನಸಾಮಾನ್ಯರಿಗೆ ಯಾವಾಗ? :
ಬಹುತೇಕ ಮಾರ್ಚ್ನಲ್ಲಿ ನಡೆಯುವ ಎರಡನೇ ಹಂತದ ಲಸಿಕಾ ವಿತರಣೆಯಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ನೀಡಲಾಗುತ್ತದೆ.
ಲಸಿಕೆ ವಿತರಣೆಗೆ ಏನೆಲ್ಲ ಕ್ರಮ? :
ಕೇಂದ್ರದಲ್ಲಿ 7 ಹಂತಗಳಲ್ಲಿ ಲಸಿಕೆ ವಿತರಣೆ ಚಟುವಟಿಕೆ ನಡೆಯುತ್ತದೆ. ನೋಂದಣಿ, ಆಗಮಿಸಲು ಮೊಬೈಲ್ ಸಂದೇಶ, ದಾಖಲೆ ಪರಿಶೀಲನೆ, ವಿಶ್ರಾಂತಿ, ಚುಚ್ಚುಮದ್ದು ಹಾಗೂ ನಿಗಾ ಕೊಠಡಿಗಳು, ಲಸಿಕೆ ಯಶಸ್ವಿಯಾಗಿ ಹಾಕಿರುವ ಸಂದೇಶ.
ಲಸಿಕೆಗೆ ಪಡೆದವರಿಗೆ ಅಡ್ಡಪರಿಣಾಮ ಸಾಧ್ಯತೆ ಇದೆಯೇ? :
ಲಸಿಕೆ ಪಡೆದ 30 ನಿಮಿಷಗಳಲ್ಲಿಯೇ ಕೆಲವರಿಗೆ ಮಾತ್ರ ಜ್ವರ, ಮೈಕೈನೋವು, ತಲೆ ಸುತ್ತು ಕಾಣಿಸಿಕೊಳ್ಳಬಹುದು. ಹೀಗಾಗಿ ನಿಗಾ ಕೊಠಡಿಯಲ್ಲಿ 30 ನಿಮಿಷ ಕೂರಿಸಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿರುತ್ತದೆ.
ಸೋಂಕಿತರಿಗೆ ಕೊಡಲಾಗುತ್ತದೆಯೇ? :
ಇಲ್ಲ, ಸೋಂಕಿನ ಲಕ್ಷಣ ಆಧರಿಸಿ ಇತರ ಔಷಧಗಳನ್ನು ಮಾತ್ರ ನೀಡಲಾಗುತ್ತದೆ. ಗುಣಮುಖರಾದ ಅನಂತರ ಭವಿಷ್ಯದಲ್ಲಿ ವೈರಸ್ನಿಂದ ರಕ್ಷಿಸಿಕೊಳ್ಳಲು ಲಸಿಕೆ ಪಡೆಯಬಹುದು.
ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೇ? :
ತಜ್ಞರ ಸೂಚನೆಯಂತೆ ಲಸಿಕೆ ಪಡೆದ ಮೇಲೂ ಮಾಸ್ಕ್ ಧರಿಸಬೇಕು. ಎಲ್ಲರಿಗೂ ಲಸಿಕೆ ಕೊಟ್ಟ ಅನಂತರ ಕಡ್ಡಾಯ ಮಾಸ್ಕ್ ನಿಯಮವನ್ನು ಕೈಬಿಡಲಾಗುತ್ತದೆ.
ಒಬ್ಬರಿಗೆ ಲಸಿಕೆ ಎಷ್ಟು ಬಾರಿ ನೀಡಲಾಗುತ್ತದೆ? ಯಾವಾಗ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ? :
ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಬೂಸ್ಟರ್ ಡೋಸ್ ತೆಗೆದುಕೊಂಡ ಎರಡು ವಾರಗಳ ಅನಂತರ ದೇಹದಲ್ಲಿ ಕೋವಿಡ್ ವೈರಸ್ ವಿರುದ್ಧ ಹೋರಾಡುವ ರೋಗ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!