Delhi ಪ್ರವಾಹ ಬಿಜೆಪಿ ನಡೆಸಿದ ಪಿತೂರಿಯಿಂದ ಸಂಭವಿಸಿದೆ: ಆಪ್ ಆರೋಪ
Team Udayavani, Jul 15, 2023, 4:19 PM IST
ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಹರಿಯಾಣ ಸರಕಾರವು ಉದ್ದೇಶಪೂರ್ವಕವಾಗಿ ರಾಷ್ಟ್ರ ರಾಜಧಾನಿ ಕಡೆಗೆ ನೀರು ಬಿಡುವುದರಿಂದ ನಗರದಲ್ಲಿ ಪ್ರವಾಹ ಉಂಟಾಗಿದೆ ಎಂದು ದೆಹಲಿ ಸಂಪುಟ ಸಚಿವ ಸೌರಭ್ ಭಾರದ್ವಾಜ್ ಶನಿವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರದ್ವಾಜ್, ಕಳೆದ 3-4 ದಿನಗಳಲ್ಲಿ ದೆಹಲಿಯಲ್ಲಿ ಮಳೆಯಾಗಿಲ್ಲ, ಆದರೂ ಯಮುನಾದಲ್ಲಿ ನೀರಿನ ಮಟ್ಟ 208.66 ಮೀಟರ್ ತಲುಪಿದೆ ಎಂದರು.
ಹತ್ನಿಕುಂಡ್ ಬ್ಯಾರೇಜ್ನಿಂದ ನೀರನ್ನು ಪಶ್ಚಿಮ ಕಾಲುವೆ, ಪೂರ್ವ ಕಾಲುವೆ ಮತ್ತು ಯಮುನಾ ಎಂಬ ಮೂರು ಕಾಲುವೆಗಳಿಂದ ಬಿಡುಗಡೆ ಮಾಡಲಾಗುತ್ತದೆ. ಪಿತೂರಿಯ ಭಾಗವಾಗಿ, ಜುಲೈ 9 ಮತ್ತು 13 ರ ನಡುವೆ, ಯಮುನಾ ಕಾಲುವೆಯಿಂದ ದೆಹಲಿಗೆ ಮಾತ್ರ ನೀರು ಬಿಡಲಾಯಿತು. ಪಶ್ಚಿಮ ಮತ್ತು ಪೂರ್ವ ಕಾಲುವೆ ಮೂಲಕ ನೀರು ಬಿಟ್ಟಿಲ್ಲ’ ಎಂದು ದೂರಿದರು.
ಶುಕ್ರವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಶನಿವಾರವೂ ಆಮ್ ಆದ್ಮಿ ಪಕ್ಷ ಹೊಸ ಆರೋಪ ಮಾಡಿರುವ ಬಗ್ಗೆ ಬಿಜೆಪಿಯಿಂದ ಯಾವುದೇ ತತ್ ಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ