AAP vs BJP; ದೆಹಲಿ ಎಂಸಿಡಿಯಲ್ಲಿ ಮತ್ತೆ ಕೋಲಾಹಲ
Team Udayavani, Jan 15, 2024, 7:15 PM IST
ಹೊಸದಿಲ್ಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ ಸ್ಥಾಯಿ ಸಮಿತಿ ರಚನೆಗೆ ಸೋಮವಾರ ಬಿಜೆಪಿ ಕೌನ್ಸಿಲರ್ಗಳು ಒತ್ತಾಯಿಸಿದ ಬೆನ್ನಲ್ಲೇ ಮತ್ತೆ ಭಾರಿ ಕೋಲಾಹಲ ಉಂಟಾಗಿದೆ.
ಪ್ರತಿಪಕ್ಷ ಬಿಜೆಪಿ ಕೌನ್ಸಿಲರ್ಗಳು ಸದನದ ಮಧ್ಯಭಾಗಕ್ಕೆ ಬಂದು ಮೇಯರ್ ಶೆಲ್ಲಿ ಒಬೆರಾಯ್ ಅವರ ಟೇಬಲ್ ಮೇಲೆ ಹತ್ತಿ ಕಾಗದಗಳನ್ನು ಹರಿದು ಹಾಕಿದರು. ಆ ಬಳಿಕ ತೀವ್ರ ಕೋಲಾಹಲ ಮತ್ತು ಗದ್ದಲ ಉಂಟಾಯಿತು. ಬಿಜೆಪಿ ಕೌನ್ಸಿಲರ್ಗಳ ಗದ್ದಲದ ನಡುವೆ ಎಂಸಿಡಿ ಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ.
ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಮಾತನಾಡಿ “ಎರಡು ಬಾರಿ ಅಧಿವೇಶನ ಪ್ರಾರಂಭವಾಗಲಿಲ್ಲ, ಇದಕ್ಕೆ ಬಿಜೆಪಿ ಕೌನ್ಸಿಲರ್ಗಳು ಕಾರಣ, ಅವರು ಕಳೆದ ವರ್ಷ ಜನವರಿಯಿಂದ ಮಾಡುತ್ತಿರುವ ಗೂಂಡಾಗಿರಿಯನ್ನು ಇಂದು ಕೂಡ ಮಾಡಿದ್ದಾರೆ. ನಾವು ಇಂದು ಅಧಿವೇಶನದಲ್ಲಿ 2 ಪ್ರಸ್ತಾಪಗಳನ್ನು ಇರಿಸಿದ್ದೇವೆ , ಒಂದು ಡಿ-ಸೀಲಿಂಗ್ ಆಗಿದ್ದು, 6 ತಿಂಗಳಿಂದ ಸೀಲ್ ಮಾಡಿರುವ ಅಂಗಡಿಗಳು ಮತ್ತು ಎರಡನೆಯದು ಸ್ಥಾಯಿ ಸಮಿತಿ ರಚನೆಯಾಗುವವರೆಗೆ ಸ್ಥಾಯಿ ಸಮಿತಿಯ ಅಧಿಕಾರವನ್ನು ಸದನಕ್ಕೆ ನೀಡಲಾಗುವುದು. ನಾವು ಸ್ಥಾಯಿ ಸಮಿತಿಯನ್ನು ರಚಿಸಲು ಬಯಸುತ್ತೇವೆ ಆದರೆ ನಾವು ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ ಬಿಜೆಪಿಯ ಗದ್ದಲದ ನಡುವೆಯೇ ನಾವು ಈ ಎರಡೂ ಪ್ರಸ್ತಾಪಗಳನ್ನು ಅಂಗೀಕರಿಸಿದ್ದೇವೆ” ಎಂದು ಹೇಳಿದರು.
#WATCH | Delhi: Ruckus and sloganeering in MCD house. BJP councillors are demanding the formation of a standing committee. pic.twitter.com/MAg2XimAJr
— ANI (@ANI) January 15, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ