ರೈಲ್ವೇಯಲ್ಲಿ ವಿನಿಮಯ ಸೇವೆ
Team Udayavani, Dec 31, 2018, 12:30 AM IST
ಹೊಸದಿಲ್ಲಿ: ರೈಲುಗಳ ಮೇಲೆ ಜಾಹೀರಾತನ್ನು ನೀಡುವ ಕಂಪನಿಗಳು ಇನ್ನು ಮುಂದೆ ಇದಕ್ಕಾಗಿ ರೈಲ್ವೆ ಇಲಾಖೆಗೆ ಶುಲ್ಕ ತೆರಬೇಕಾಗಿಲ್ಲ. ಅದರ ಬದಲು ಇಲಾಖೆಗೆ ತಾನು ಜಾಹೀರಾತು ನೀಡಲಿರುವ ಉತ್ಪನ್ನ, ಸೇವೆಗಳನ್ನು ಉಚಿತವಾಗಿ ಪೂರೈಸಿದರೆ ಸಾಕು. “ವಿನಿಮಯ ವ್ಯವಸ್ಥೆ’ (ಬಾರ್ಟರ್ ವ್ಯವಸ್ಥೆ) ಮಾದರಿಯಲ್ಲಿ ಇಂಥ ಹೊಸ ಜಾಹೀರಾತು ಒಪ್ಪಂದಗಳನ್ನು ಮಾಡಿ ಕೊಳ್ಳಲು ರೈಲ್ವೆ ಇಲಾಖೆಯೀಗ ಮುಂದ್ದಾಗಿದೆ. ಇಂಥದ್ದೊಂದು ಹೊಸ ವಿಧಾನವನ್ನು ರೈಲ್ವೆ ಮಂಡಳಿಯ ಟ್ರಾನ್ಸ್ಫಾರ್ಮೇಶನ್ ಸೆಲ್ ವತಿ ಯಿಂದ ರೂಪುಗೊಂಡಿರುವ ಈ ಹೊಸ ಯೋಜ ನೆಯನ್ನು ಮೊದಲಿಗೆ ಪ್ರಾಯೋಗಿಕ ವಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಜಾಹೀರಾತು ಪ್ರಕಟಿಸ ಬಯಸುವ ಕಂಪನಿಯು ಕೋಚಿಂಗ್ ಡಿಪಾರ್ಟ್ಮೆಂಟ್ ಅಧಿಕಾರಿಗೆ (ಸಿಡಿಒ) ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ವಿವರಗಳನ್ನು ರೈಲ್ವೆ ಇಲಾಖೆಯ ಜಾಲತಾಣದಲ್ಲಿ 21 ದಿನಗಳ ಕಾಲ ಪ್ರದರ್ಶಿಸಲಾಗುತ್ತದೆ. ಇದೇ ಉತ್ಪನ್ನ ಅಥವಾ ಸೇವೆಗಳನ್ನು ನೀಡುವ ಇತರ ಕಂಪನಿಗಳಿಗೂ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗುತ್ತದೆ. ಹೆಚ್ಚಿನ ಕಂಪನಿಗಳು ಮುಂದೆ ಬಂದಲ್ಲಿ, ಅವುಗಳಲ್ಲೊಂದನ್ನು ಜಾಹೀರಾತಿಗಾಗಿ ಆಯ್ಕೆ ಮಾಡಲಾಗುತ್ತದೆ.
ಕೆಲಸ ಮಾಡುತ್ತದೆ?: ಸೋಪ್ ತಯಾರಿಕಾ ಕಂಪನಿಯೊಂದು ಜಾಹೀರಾತಿಗಾಗಿ ಆಯ್ಕೆಯಾದಲ್ಲಿ, ಆ ಕಂಪನಿ ಜಾಹೀರಾತು ಶುಲ್ಕದ ಬದಲಿಗೆ ರೈಲು ನಿಲ್ದಾಣಗಳ ಅಥವಾ ಅಧಿಕಾರಿಗಳ ಕೊಠಡಿಗಳ ವಾಷ್ ರೂಂಗಳಲ್ಲಿ ಬಳಕೆಯಾಗುವಷ್ಟು ಸೋಪುಗಳನ್ನು ನೀಡಬೇಕಿರುತ್ತದೆ. ಇಂಟರ್ನೆಂಟ್ ಮುಂತಾದ ಸೇವೆಗಳನ್ನು ನೀಡುವ ಕಂಪನಿಗಳಿಗೂ ಇದೇ ನಿಯಮ ಅನ್ವಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ