ವಿವಾದ ಸುಖಾಂತ್ಯ: ಗೋವಾಕ್ಕೆ ರಾಜ್ಯದ ಮೀನು ಪೂರೈಕೆ ಶುರು
Team Udayavani, Dec 7, 2018, 6:00 AM IST
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಗುರುವಾರದಿಂದ ಮೀನು ಪೂರೈಕೆ ಪುನಾರಂಭಗೊಂಡಿದೆ. ಕರ್ನಾಟಕದಿಂದ 9 ಟ್ರಕ್ ಮೀನುಗಳು ಗೋವಾ ಮಾರುಕಟ್ಟೆಗೆ ಬಂದಿಳಿದಿವೆ. ಎಫ್ಡಿಎ ಪರವಾನಿಗೆ ಪಡೆದುಕೊಂಡು ಇನ್ಸುಲೇಟೆಡ್ ವಾಹನಗಳ ಮೂಲಕ ಮೀನನ್ನು ಕಳುಹಿಸಲಾಗಿದೆ. ಈ ಮೂಲಕ ಕಳೆದ ಹಲವು ತಿಂಗಳಿಂದ ಉಂಟಾಗಿದ್ದ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ.
ಈ ಕುರಿತು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾತನಾಡಿ, ಗೋವಾ ಸರಕಾರದ ಎಫ್ಡಿಎ ಕಾಯ್ದೆಯಡಿ ಜಾರಿಗೊಳಿಸಲಾಗಿದ್ದ ಸೂಚನೆಗಳನ್ನು ಪಾಲಿಸುವವರಿಗೆ ಗೋವಾಕ್ಕೆ ಪ್ರವೇಶಾವಕಾಶ ಲಭಿಸಲಿದೆ. ಕರ್ನಾ ಟಕದಿಂದ ಗೋವಾಕ್ಕೆ ಮೀನು ತುಂಬಿಕೊಂಡು ಬರುತ್ತಿದ್ದ ವಾಹನಗಳನ್ನು ಗಡಿ ಭಾಗದ ಆರ್ಟಿಒ ಮತ್ತು ಪೊಲೀಸರು ತಪಾಸಣೆ ನಡೆಸಿದ್ದು ಅವರಿಗೆ ಆಕ್ಷೇಪಾರ್ಹ ಯಾವುದೇ ಸಂಗತಿ ಕಂಡು ಬಂದಿಲ್ಲ ಎಂದರು. ಗೋವಾ ನಿಷೇಧ ಪರಿಣಾಮ 6 ತಿಂಗಳಿನಿಂದ ಕರ್ನಾಟಕ, ಮಹಾ ರಾಷ್ಟ್ರ ಮತ್ತು ಇತರ ಭಾಗಗಳಿಂದ ಮೀನು ಪೂರೈಕೆ ಸ್ಥಗಿತಗೊಂಡಿತ್ತು. ಈ ಮೊದಲು ಕರ್ನಾಟಕದಿಂದ ಪ್ರತಿದಿನ 80ರಿಂದ 90 ಟ್ರಕ್ ಮೀನು ಗೋವಾಕ್ಕೆ ಬರುತ್ತಿತ್ತು.
ಮೀನು ರವಾನೆ
ಕುಂದಾಪುರ: ನಿಷೇಧವನ್ನು ಸಡಿಲಿಕೆ ಮಾಡಿರುವ ಹಿನ್ನೆಲೆ ಯಲ್ಲಿ ಗೋವಾ ಮಾರುಕಟ್ಟೆಗೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೀನು ಬುಧ ವಾರ ರಾತ್ರಿಯಿಂದ ರವಾನೆ ಆರಂಭಗೊಂಡಿದೆ. ಈಗ ಎಫ್ಡಿಎ ಪರವಾನಿಗೆ ಹೊಂದಿರುವ ಇನ್ಸುಲೇಟರ್ ವಾಹನಗಳು ಗೋವಾ ಕಡೆಗೆ ಮೀನುಗಳನ್ನು ಸಾಗಿಸುತ್ತಿವೆ. ಸೋಮವಾರ ಇನ್ನೊಂದು ಸುತ್ತಿನ ಮಾತು ಕತೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ