ಒಡಿಶಾ: ಇಬ್ಬರು ವೈದ್ಯರಿಗೆ ಲಕ್ಷಾಂತರ ರೂ. ದೋಖಾ
Team Udayavani, Feb 20, 2021, 7:25 AM IST
ಕಟಕ್ (ಒಡಿಶಾ): ಕಾಲ ತಾಂತ್ರಿಕವಾಗಿ ಬಹಳ ಮುಂದುವರಿದಿದೆ. ಹಾಗೆಯೇ ಅದನ್ನೇ ಬಳಸಿಕೊಂಡು ವಂಚನೆಯೂ ಧಾರಾಳವಾಗಿ ಸಾಗಿದೆ. ಅಚ್ಚರಿಯೆಂದರೆ ಉನ್ನತಮಟ್ಟದ ಶಿಕ್ಷಣ ಪಡೆದ ವೈದ್ಯ, ವಕೀಲ, ಪೊಲೀಸರೂ ಇದಕ್ಕೆ ನಿರಂತರ ವಾಗಿ ಬಲಿಯಾಗುತ್ತಿದ್ದಾರೆ. ಅಂತಹದ್ದೊಂದು ಘಟನೆ ಒಡಿ ಶಾದ ಕಟಕ್ನಲ್ಲಿ ನಡೆದಿದೆ.
ವೈದ್ಯ ಡಾ| ಸನಾತನ ಮೊಹಾಂತಿ ಅವರ 77,86,727 ರೂ.ಗಳನ್ನು ಸೈಬರ್ ವಂಚಕರು ಎಗರಿಸಿದ್ದಾರೆ. ವೈದ್ಯರಿಗೆ ಕರೆ ಮಾಡಿದ ವಂಚಕರು ಬ್ಲಾಕ್ ಆಗಿರುವ ವೈದ್ಯರ ಎಟಿಎಂ ಕಾರ್ಡ್ ಅನ್ನು ಮತ್ತೆ ಸಕ್ರಿಯ ಮಾಡಲು, ಬ್ಯಾಂಕ್ ಖಾತೆ ವಿವರ, ಎಟಿಎಂ ಕಾರ್ಡ್ ಹಿಂದಿನ ಸಿವಿವಿ ಸಂಖ್ಯೆಯನ್ನು ಕೇಳಿದ್ದಾರೆ. ಅದಾಗಿ ಫೆ.9ರಿಂದ 15ರ ವರೆಗೆ ಹಣವನ್ನು ಸದ್ದಿಲ್ಲದೇ ಎಗರಿಸಲಾಗಿದೆ. ಇನ್ನೊಂದು ಕಡೆ ವಿದೇಶಿ ಮೂಲದ ನಕಲಿ ವಿಮಾ ಕಂಪೆನಿಯೊಂದು, ಆಯು ರ್ವೇದ ವೈದ್ಯರೊಬ್ಬರಿಗೆ 55 ಲಕ್ಷ ರೂ.ಗಳನ್ನು ವಂಚಿಸಿದೆ. 2015ಕ್ಕೂ ಮುನ್ನ ಈ ಕಂಪೆನಿಗೆ 55 ಲಕ್ಷ ರೂ.ಗಳನ್ನು ವಿಮೆಯನ್ನಾಗಿ ಕಟ್ಟಲಾಗಿತ್ತು. ಮುಂದಿನ ಐದು ವರ್ಷಗಳಲ್ಲಿ ಹಣ ದುಪ್ಪಟ್ಟು ಆಗುವುದು ಎಂದು ಭರವಸೆ ನೀಡಲಾಗಿತ್ತು. ಪಾಲಿಸಿ ಅವಧಿ ಮುಗಿದಾಗ ಹಣವನ್ನು ಪಡೆಯಲು ತೆರಳಿದರೆ, ಅಂತಹದ್ದೊಂದು ಕಂಪೆನಿಯೇ ಇಲ್ಲ ಎಂದು ವೈದ್ಯರಿಗೆ ಗೊತ್ತಾಯಿತು. ದಿಗ್ಭ್ರಾಂತರಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ಪ್ರಕರಣಗಳನ್ನು ಒಟ್ಟಿಗೆ ತನಿಖೆ ಮಾಡಲು ಕಟಕ್ ಪೊಲೀಸರು ತೀರ್ಮಾನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ