ಒತ್ತೆಯಾಗಿಟ್ಟುಕೊಂಡು, ಒತ್ತಾಯದ ಮದುವೆ!
ಬೆಂಗಳೂರಿನ ಗೂಗಲ್ ಕಚೇರಿಯ ಹಿರಿಯ ಮ್ಯಾನೇಜರ್ಗೆ ಕಾಟ
Team Udayavani, Oct 17, 2022, 7:25 AM IST
ಭೋಪಾಲ್: ಬೆಂಗಳೂರಿನ ಗೂಗಲ್ ಕಚೇರಿಯ ಹಿರಿಯ ಮ್ಯಾನೇಜರ್ವೊಬ್ಬರನ್ನು ಒತ್ತೆಯಾಗಿಟ್ಟುಕೊಂಡು, ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಿ, ಹಣಕ್ಕಾಗಿ ಬೆದರಿಕೆ ಹಾಕಿರುವ ಘಟನೆ ಮಧ್ಯಪ್ರದೇಶದ ಕಮಲಾ ನಗರದಲ್ಲಿ ನಡೆದಿದೆ.
ಗಣೇಶ್ ಶಂಕರ್ ಅವರು ಶಿಲ್ಲಾಂಗ್ನ ಐಐಎಂನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುವಾಗ ಭೋಪಾಲ್ ಮೂಲದ ಸುಜಾತಾ ಜತೆ ಸ್ನೇಹ ಬೆಳೆಸಿದ್ದರು. ಅದೇ ಸ್ನೇಹದ ಆಧಾರದಲ್ಲಿ ಇತ್ತೀಚೆಗೆ ಗಣೇಶ್ರನ್ನು ಭೋಪಾಲ್ಗೆ ಕರೆಸಿಕೊಳ್ಳಲಾಗಿದೆ. ನಗರಕ್ಕೆ ಬಂದ ಅವರನ್ನು ಒತ್ತೆಯಾಗಿಟ್ಟುಕೊಂಡು, ಮತ್ತು ಬರಿಸುವ ಔಷಧವನ್ನು ನೀಡಲಾಗಿದೆ. ನಂತರ ಗಣೇಶ್ ಹಾಗೂ ಸುಜಾತಾಗೆ ಮದುವೆ ಮಾಡಿ ಆ ಕಾರ್ಯಕ್ರಮದ ಫೋಟೋಗಳನ್ನು ಸೆರೆಹಿಡಿಯಲಾಗಿದೆ.
ಗಣೇಶ್ಗೆ ಮದುವೆ ಫೋಟೋಗಳನ್ನು ತೋರಿಸಿ, 40 ಲಕ್ಷ ರೂ. ಕೊಡುವಂತೆ ಸುಜಾತ ಕುಟುಂಬ ಕೇಳಿದೆ. ಒಂದು ವೇಳೆ ಹಣ ಕೊಡದೇ ಹೋದರೆ ಅವರ ವಿರುದ್ಧ ಸುಳ್ಳು ದೂರು ನೀಡುವುದಾಗಿಯೂ ಬೆದರಿಕೆ ಹಾಕಲಾಗಿದೆ ಎಂದು ಗಣೇಶ್ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ