ಮತಾಂತರ ಹೊಂದಿದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ
Team Udayavani, Mar 8, 2018, 7:30 AM IST
ಮುಂಬೈ: ಹಿಂದುವಾಗಿಯೇ ಹುಟ್ಟಿದ ವ್ಯಕ್ತಿ ಮತ್ತೂಂದು ಮತಕ್ಕೆ ಮತಾಂತರ ಹೊಂದಿದರೂ ಪಿತ್ರಾರ್ಜಿತ ಆಸ್ತಿ ಪಡೆಯಲು ಅರ್ಹತೆ ಹೊಂದಿದ್ದಾನೆ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ.ಮೃದುಲಾ ಭಟ್ಕರ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಆಸ್ತಿಯ ಬಗ್ಗೆ ಅಸುನೀಗಿದ ವ್ಯಕ್ತಿ ಉಯಿಲು ಬರೆಯದೇ ಇದ್ದಲ್ಲಿ ಅದರ ಹಕ್ಕುದಾರ ಮಗನೇ ಆಗಿರುತ್ತಾನೆ. ಉತ್ತರಾಧಿಕಾರ ಎನ್ನುವುದು ಆಯ್ಕೆಯ ವಿಚಾರವಲ್ಲ ಅದು ಹುಟ್ಟಿನಿಂದ ಮತ್ತು ಮದುವೆಯ ಸಂದರ್ಭದಲ್ಲಿ ನಿಗದಿಯಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಮುಂಬೈನ ಮಾಟುಂಗದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಮೂರು ವರ್ಷಗಳ ಹಿಂದೆ ಮಹಿಳೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೋರ್ಟಲ್ಲಿ ಈ ದಾವೆ ಹೂಡಿದ್ದರು. ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರು. ತನ್ನ ಸಹೋದರ ತಂದೆಯವರ ಅಂಗಡಿಯನ್ನು ಈ ಹಿಂದೆಯೇ ಮಾರಿದ್ದ. ಇದೀಗ ಫ್ಲ್ಯಾಟ್ ಮಾರಾಟ ಮಾಡಲು ಹೊರಟಿರುವುದರಿಂದ ಸಮಾನ ಪಾಲು ನೀಡಬೇಕು ಎಂದು ವಾದಿಸಿದ್ದರು. ಆದರೆ ಅದನ್ನು ಒಪ್ಪದ ಸಹೋದರ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಆಸ್ತಿಯ ಹಕ್ಕನ್ನು ಸಹೋದರಿ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದ. ಆ ವಾದವನ್ನು ಸ್ಥಳೀಯ ಕೋರ್ಟ್ ಒಪ್ಪಲಿಲ್ಲ. ಅದನ್ನು ಪ್ರಶ್ನಿಸಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ