ನಿಮಗೆ ಅಗ್ನಿಪಥ ಯೋಜನೆ ಇಷ್ಟವಿಲ್ಲದಿದ್ದರೆ ಸೇನೆಗೆ ಸೇರಬೇಡಿ, ಬಲವಂತವಿಲ್ಲ: ವಿ.ಕೆ.ಸಿಂಗ್
Team Udayavani, Jun 20, 2022, 10:01 AM IST
ನಾಗ್ಪುರ: ‘ಅಗ್ನಿಪಥ’ ಯೋಜನೆಯ ವಿರುದ್ಧ ಹಿಂಸಾಚಾರದ ನಡುವೆ, ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ ಸಿಂಗ್ (ನಿವೃತ್ತ) ಭಾನುವಾರ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ರೂಪಿಸಿರುವ ಹೊಸ ನೀತಿಯನ್ನು ಇಷ್ಟಪಡದಿದ್ದರೆ ಅವರು ಸೈನೆಯನ್ನು ಆರಿಸಿಕೊಳ್ಳಬಾರದು ಎಂದು ಹೇಳಿದರು.
ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಕೆ. ಸಿಂಗ್, ಭಾರತೀಯ ಸೇನೆಯು ಸೈನಿಕರನ್ನು ಬಲವಂತಪಡಿಸುವುದಿಲ್ಲ ಮತ್ತು ಸೇನೆಗೆ ಸೇರಬಯಸುವ ಆಕಾಂಕ್ಷಿಗಳು ತಮ್ಮ ಸ್ವಂತ ಇಚ್ಛೆಯಿಂದ ಸೇರಬೇಕು ಎಂದು ಹೇಳಿದರು.
“ಸ್ವಯಂಪ್ರೇರಿತವಾಗಿ ಸೇನೆಗೆ ಸೇರಬೇಕು, ಬಲವಂತದಿಂದಲ್ಲ. ಯಾವುದೇ ಆಕಾಂಕ್ಷಿಗಳು ಸೇರಲು ಬಯಸಿದರೆ, ಅವರು ತಮ್ಮ ಇಚ್ಛೆಯಂತೆ ಸೇರಬಹುದು, ನಾವು ಸೈನಿಕರನ್ನು ಬಲವಂತಪಡಿಸುವುದಿಲ್ಲ. ಆದರೆ ನಿಮಗೆ ಈ ನೇಮಕಾತಿ ಯೋಜನೆ (‘ಅಗ್ನಿಪಥ್’) ಇಷ್ಟವಾಗದಿದ್ದರೆ ಬರಬೇಡಿ, ಯಾರು ನಿಮ್ಮನ್ನು ಬರಲು ಒತ್ತಾಯ ಮಾಡುತ್ತಿದ್ದಾರೆ? ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಮಾತ್ರ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ, ಬಸ್ ರೈಲುಗಳನ್ನು ಸುಟ್ಟರೆ ಅಲ್ಲ” ಎಂದು ವಿ.ಕೆ.ಸಿಂಗ್ ಹೇಳಿದರು.
ಇದನ್ನೂ ಓದಿ:ವಿವಾದಕ್ಕೆ ಕಾರಣವಾದ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ
ವಿ.ಕೆ.ಸಿಂಗ್ ಅವರ ಹೇಳಿಕೆಯ ವೀಡಿಯೊವನ್ನು ಟ್ಯಾಗ್ ಮಾಡಿದ ಕಾಂಗ್ರೆಸ್ ನ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ, “ತನ್ನ ನಿವೃತ್ತಿಯನ್ನು ಮುಂದೂಡಲು ನ್ಯಾಯಾಲಯಕ್ಕೆ ಹೋದ ವ್ಯಕ್ತಿ ಯುವಕರನ್ನು 23 ಕ್ಕೆ ನಿವೃತ್ತಿ ಹೊಂದಲು ಕೇಳುತ್ತಿದ್ದಾನೆ” ಎಂದು ಟೀಕೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್