ಗೋವಾದಲ್ಲಿ ಹೆಚ್ಚಿದ ಪ್ರವಾಸಿಗರು: ದರಗಳು ದುಪ್ಪಟ್ಟು
Team Udayavani, Aug 10, 2022, 4:43 PM IST
ಪಣಜಿ: ರಕ್ಷಾಬಂಧನ ಮತ್ತು ಆಗಸ್ಟ್ 15 ರ ಸ್ವಾತಂತ್ರ್ಯ ದಿನದ ನಡುವೆ ಸತತ ಮೂರು-ನಾಲ್ಕು ದಿನಗಳ ರಜೆ ಇರುವುದರಿಂದ ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಗಡ ನೋಂದಣಿಯಿಂದಾಗಿ ರಾಜ್ಯದ ಬಹುತೇಕ ಹೋಟೆಲ್ ಗಳು ಈಗಾಗಲೇ ಭರ್ತಿಯಾಗುತ್ತಿವೆ. ಮತ್ತೊಂದೆಡೆ, ಪ್ರಯಾಣಿಕರನ್ನು ಕರೆತರುವ ಬಸ್ಗಳು ಮತ್ತು ವಿಮಾನಗಳ ಪ್ರಯಾನ ದರಗಳು ಬಹುತೇಕ ದುಪ್ಪಟ್ಟಾಗಿದೆ.
ಸದ್ಯ ರಜಾ ದಿನದ ಸಂದರ್ಭದಲ್ಲಿ ದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿದೆ, ವಿಮಾನಗಳು, ರೈಲುಗಳು ಮತ್ತು ಬಸ್ಗಳ ಟಿಕೆಟ್ ದರಗಳು ಹೆಚ್ಚಾಗಿದೆ. ಆಗಸ್ಟ್ 11 ರಿಂದ ಗುರುವಾರ ರಾಜ್ಯಕ್ಕೆ ಬರುವ ಬಹುತೇಕ ವಿಮಾನಗಳು, ರೈಲುಗಳು ಮತ್ತು ಬಸ್ ಟಿಕೆಟ್ಗಳು ಮುಂಗಡ ಬುಕ್ ಆಗಿದೆ. ಹೀಗಾಗಿ ಟಿಕೆಟ್ ಬೇಕು ಎನ್ನುವವರು ಹೆಚ್ಚಿನ ಹಣ ಪಾವತಿಸಿ ಟಿಕೆಟ್ ಖರೀದಿಸಬೇಕಾಗಲಿದೆ.
ಗುರುವಾರದಿಂದ ಭಾನುವಾರದವರೆಗೆ ಸಾಮಾನ್ಯ ವಿಮಾನ ಟಿಕೆಟ್ ಕನಿಷ್ಠ 6 ಸಾವಿರ ರೂಪಾಯಿಗಳಾಗಿದ್ದರೆ, ಕೆಲವು ವಿಮಾನಯಾನ ಸಂಸ್ಥೆಗಳ ಟಿಕೆಟ್ ದರ 15 ಸಾವಿರಕ್ಕೂ ಹೆಚ್ಚು ತಲುಪಿದೆ. ಅಲ್ಲದೆ, ಮುಂಬೈ, ಪುಣೆಯಿಂದ ಗೋವಾಕ್ಕೆ ಬರುವ ಬಸ್ಗಳ ಟಿಕೆಟ್ ದರ ಸಾಮಾನ್ಯಕ್ಕಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ.
ವಿಮಾನ ಪ್ರಯಾಣ ದುಬಾರಿ
ಗೋವಾಕ್ಕೆ ಬರಲು ವಿಮಾನ ಪ್ರಯಾಣದರ ಕನಿಷ್ಠ 6 ಸಾವಿರ ರೂಗಳಿಂದ 15 ಸಾವಿರ ರೂ ಗೆ ಹೆಚ್ಚಳವಾಗಿದೆ. ಇಷ್ಟೇ ಅಲ್ಲದೆಯೇ ಆಗಸ್ಟ್ 16ರಿಂದ ಗೋವಾದಿಂದ ವಾಪಸಾಗುವ ವಿಮಾನ ಟಿಕೆಟ್ ದರ 8ರಿಂದ 12 ಸಾವಿರಕ್ಕೆ ಏರಿಕೆಯಾಗಿದೆ. ಐಷಾರಾಮಿ ಹೋಟೆಲ್ ರೂಂಗಳು ದಿನವೊಂದಕ್ಕೆ ಕನಿಷ್ಠ 10 ಸಾವಿರದಿಂದ, ಮಧ್ಯಮ ಶ್ರೇಣಿಯ ಹೋಟೆಲ್ಗಳು ಕನಿಷ್ಠ 5 ಸಾವಿರದಿಂದ ಪ್ರಾರಂಭವಾಗುತ್ತವೆ.
ಪ್ರವಾಸಿಗರ ಜೇಬಿಗೆ ಕತ್ತರಿ
ಜಗತ್ಪ್ರಸಿದ್ಧ ಪ್ರವಾಸಿ ತಾಣ ಗೋವಾಕ್ಕೆ ಆಗಮಿಸಲು ವಿಮಾನ ಟಿಕೆಟ್ ದುಬಾರಿಯಾಗಿದೆ ಮತ್ತು ರೈಲ್ವೆಯೂ ದುಬಾರಿಯಾಗಿದೆ, ಖಾಸಗಿ ಬಸ್ ದರ ಕೂಡ ಹೆಚ್ಚಾಗಿದೆ. ಗೋವಾ ತಲುಪಲು ಬಸ್ ಟಿಕೆಟ್ ದರ 2500 ರಿಂದ 6 ಸಾವಿರಕ್ಕೆ ತಲುಪಿದೆ. ಹಾಗಾಗಿ ಆಗಸ್ಟ್ 15 ರಂದು ಗೋವಾ ಮೂಲಕ ಹೋಗಲು 3,000 ರೂ.ನಿಂದ 5,000 ರೂ, ಆಗಸ್ಟ್ 16 ರಂದು 2,000 ರೂ.ನಿಂದ 3,000 ರೂ. ಹೆಚ್ಚಿನ ಹಣವನ್ನು ಪ್ರವಾಸಿಗರು ತೆರಲೇಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ