ಇದುವರೆಗೆ ನಾಲ್ಕು ಸಾವಿರ ಭಾರತೀಯರ Airlift ; ಮೇ 15ರೊಳಗೆ 11 ಸಾವಿರ ಪ್ರಜೆಗಳು ಸ್ವದೇಶಕ್ಕೆ
Team Udayavani, May 12, 2020, 7:42 AM IST
ಹೊಸದಿಲ್ಲಿ: ಜೀವ ಕೈಯಲ್ಲಿ ಹಿಡಿದು ಯಾವಾಗ ತಾಯ್ನಾಡು ಎಂದು ಕಾತರಿಸುತ್ತಿದ್ದ 4 ಸಾವಿರ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ವಂದೇ ಭಾರತ್ ಯೋಜನೆಯ ಗುರಿಯಂತೆ, ಮೇ 15ರ ಒಳಗೆ ಇನ್ನು 11 ಸಾವಿರ ಭಾರತೀಯರು ತಾಯ್ನಾಡಿಗೆ ಮರಳಲಿದ್ದಾರೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲ ಶ್ರೀವಾಸ್ತವ ಹೇಳಿದ್ದಾರೆ.
ಸೋಮವಾರ ಬೆಳಗಿನಿಂದ ತಡರಾತ್ರಿವರೆಗೆ 6 ವಿಮಾನಗಳು ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಳಿದಿವೆ. ಲಂಡನ್ – ಬೆಂಗಳೂರು ಸೇರಿದಂತೆ ಢಾಕಾ- ಮುಂಬಯಿ, ಅಬುಧಾಬಿ- ಹೈದರಾಬಾದ್, ಕೌಲಾ ಲಂಪುರ್- ಚೆನ್ನೈ ಹಾಗೂ ಬಹ್ರೈನ್ನಿಂದ ಹೊರಟ ವಿಶೇಷ ವಿಮಾನ ಕಲ್ಲಿಕೋಟೆಯನ್ನು ತಡರಾತ್ರಿ ತಲುಪಿದೆ.
ಅಲ್ಲದೆ, ಏರ್ ಇಂಡಿಯಾ- ಎಐ 1617 ವಿಮಾನದಲ್ಲಿ ಸ್ಯಾನ್ಫ್ರಾನ್ಸಿಸ್ಕೋದಿಂದ ಮುಂಬಯಿ ಮಾರ್ಗವಾಗಿ ಹೈದರಾಬಾದ್ಗೆ 118 ಅನಿವಾಸಿ ಭಾರತೀಯರು ಆಗಮಿಸಿದ್ದಾರೆ. ಏರ್ಕ್ರಾಫ್ಟ್ ನಿಂದಲೇ 20- 25 ಮಂದಿಯ ತಂಡ ಮಾಡಿ, ಸೂಕ್ತ ಸ್ಕ್ರೀನಿಂಗ್ ನಡೆಸಿ, ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಸೋಂಕಿತರಿಲ್ಲ: ರವಿವಾರದಿಂದ ಬಂದಿಳಿದಿರುವ ವಿಮಾನಗಳ 827 ಪ್ರಯಾಣಿಕರಿಗೆ ಮುಂಬಯಿನಲ್ಲಿ ಅಗತ್ಯ ಸೂಚನೆಗಳನ್ನು ನೀಡಿ, ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುತ್ತಿದೆ.
ಲಂಡನ್, ಸಿಂಗಾಪುರ, ಮನಿಲಾ, ಸ್ಯಾನ್ಫ್ರಾನ್ಸಿಸ್ಕೋದಿಂದ ಬಂದಿರುವ ಪ್ರಯಾಣಿಕರಲ್ಲಿ ಯಾರಿಗೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ, ಯಾರನ್ನೂ ಐಸೋಲೇಶನ್ ವಾರ್ಡ್ಗೆ ಸ್ಥಳಾಂತರಿಸಿಲ್ಲ ಎಂದು ಬೃಹತ್ ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…