ಭಾರತೀಯ ರೈಲ್ವೆಯಿಂದ ಜೂ. 21ರಿಂದ “ಶ್ರೀ ರಾಮಾಯಣ ಯಾತ್ರೆ’
Team Udayavani, May 26, 2022, 6:35 AM IST
ಹೊಸದಿಲ್ಲಿ: ಭಾರತೀಯ ರೈಲ್ವೇಯ ಐಆರ್ಸಿಟಿಸಿ ನಡೆಸುವ “ಶ್ರೀ ರಾಮಾಯಣ ಯಾತ್ರೆ’ ಜೂ.21ರಂದು ಆರಂಭವಾಗಲಿದೆ.
ರಾಮನ ಜೀವನದಲ್ಲಿ ಬರುವ ಎಲ್ಲ ಪ್ರಮುಖ ಕ್ಷೇತ್ರಗಳ ಸುತ್ತಾಟವನ್ನು ಈ ಯಾತ್ರೆಯಲ್ಲಿ ಮಾಡಬಹುದಾಗಿದೆ. ಯಾತ್ರೆಗೆ ಭಕ್ತರನ್ನು ಕರೆದೊಯ್ಯುವ “ಭಾರತ್ ಗೌರವ್ ಪ್ರವಾಸಿ ರೈಲು’ ಜೂ.21ರಂದು ದಿಲ್ಲಿಯ ಸಫªರ್ಜುಂಗ್ ರೈಲ್ವೇ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ಒಟ್ಟು 18 ದಿನಗಳ ಕಾಲ ಅಯೋಧ್ಯೆ, ಜಾನಕಪುರ (ನೇಪಾಲ), ಸೀತಾಮಹಿì, ಬುಕ್ಸಾರ್, ವಾರಾಣಸಿ, ಪ್ರಯಾಗ್ರಾಜ್, ಶೃಂಗವೇರಪುರ, ಚಿತ್ರಕೂಟ, ನಾಸಿಕ್, ಹಂಪಿ, ರಾಮೇಶ್ವರ, ಕಾಂಚಿಪುರಂ ಮತ್ತು ಭದ್ರಾಚಲಂ ಸುತ್ತಲಿದೆ.
ಒಟ್ಟು 8000 ಕಿ.ಮೀ ಪ್ರಯಾಣಿಸುವ ಈ ಯಾತ್ರೆಗೆ ಭಕ್ತರು 71,820 ರೂ. ಪಾವತಿಸಿ ಟಿಕೆಟ್ ಕಾದಿರಿಸಿಕೊಳ್ಳಬಹುದು. ಜೋಡಿಯಾಗಿ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಒಂದು ಟಿಕೆಟ್ ಬೆಲೆ 62,370 ರೂ. ನಿಗದಿಪಡಿಸಲಾಗಿದೆ. 5-11 ವರ್ಷದ ಮಕ್ಕಳಿಗೆ ಟಿಕೆಟ್ ದರ 56,700 ರೂ. ಆಗಿದೆ. 11 ಥರ್ಡ್ ಕ್ಲಾಸ್ ಎಸಿ ಬೋಗಿಗಳು ರೈಲಿನಲ್ಲಿರಲಿದ್ದು, ಒಟ್ಟು 600 ಭಕ್ತರಿಗೆ ಪ್ರಯಾಣಕ್ಕೆ ಅವಕಾಶವಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್