ಇಂದು ಮೊದಲ ಅಮೃತ ಸರೋವರ ಉದ್ಘಾಟನೆ
Team Udayavani, May 13, 2022, 6:43 AM IST
ಲಕ್ನೋ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ “ಅಮೃತ ಸರೋವರ’ ಇಂದು ಉದ್ಘಾಟನೆಯಾಗಲಿದೆ. ಕೇಂದ್ರ ಸಚಿವ ಮುಖ್ತಾರ್ ಅಬ್ಟಾಸ್ ನಖ್ವಿ ಮತ್ತು ಉತ್ತರ ಪ್ರದೇಶದ ಜಲ ಶಕ್ತಿ ಸಚಿವ ಸ್ವತಂತ್ರ ದೇವ್ ಸಿಂಗ್ ಸರೋವರವನ್ನು ಉದ್ಘಾಟಿಸಲಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸ ವದ ಸಮಯಕ್ಕೆ ಪ್ರತೀ ಜಿಲ್ಲೆಯು ಕನಿಷ್ಠ 75 ಸರೋವರಗಳನ್ನು ನಿರ್ಮಿ ಸಬೇಕು. ಅವುಗಳಿಗೆ “ಅಮೃತ ಸರೋವರ’ ಎಂದು ಕರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದರು. ಅದರಂತೆ ಎಲ್ಲೆಡೆ ಸರೋವರ ನಿರ್ಮಾಣ ಮಾಡಲಾಗುತ್ತಿದ್ದು, ದೇಶದಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಮೊದಲ ಅಮೃತ ಸರೋವರ ರಾಂಪುರದ್ದಾಗಿದೆ. ಈ ಸರೋವರದಿಂದ ಪರಿಸರ,
ಜಲ ಸಂರಕ್ಷಣೆಯಾಗುವುದರ ಜತೆ ಪ್ರವಾಸಿಗಳ ಆಕರ್ಷಣೆಯೂ ಆಗಲಿದೆ ಎಂದು ಸಚಿವ ನಖ್ವಿ ತಿಳಿಸಿದ್ದಾರೆ.