ಇನ್ಫಿ ಮೂರ್ತಿ ನಮ್ಮ ಹಿತೈಷಿ, ಪಾಲುದಾರರೂ ಹೌದು
Team Udayavani, Jul 27, 2017, 8:25 AM IST
ಮುಂಬಯಿ: ಇನ್ಫೋಸಿಸ್ ಸಂಸ್ಥಾಪಕ ಡಾ| ಎನ್.ಆರ್.ನಾರಾಯಣ ಮೂರ್ತಿ ಅವರನ್ನು ಹಿತೈಷಿ ಎಂದುಕೊಂಡಿದ್ದೇವೆಯೇ ಹೊರತು, ಎಂದೂ ಪಾಲುದಾರ ಎನ್ನುವ ರೀತಿಯಲ್ಲಿ ನೋಡಿಯೇ ಇಲ್ಲ’ ಎಂದು ಕಂಪೆನಿ ಸಹ ಅಧ್ಯಕ್ಷ ರವಿ ವೆಂಕಟೇಶನ್ ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, “ಮೂರ್ತಿ ಅವರನ್ನು ಕಂಪೆನಿಯ ಹಿತೈಷಿಯಾಗಿ ನೋಡಲು ನಾವೆಲ್ಲ ಇಷ್ಟಪಡುತ್ತೇವೆ. ಮುಂದೆ ಯೂ ಇದೇ ಮಾದರಿಯಲ್ಲಿ ನೋಡುತ್ತೇವೆ’ ಎಂದಿದ್ದಾರೆ.
ನಾರಾಯಣಮೂರ್ತಿಯವರನ್ನು ಎ ಅಥವಾ ಬಿ ಎನ್ನುವ ಹಣೆಪಟ್ಟಿ ಇಟ್ಟು ನಾವು ನೋಡಿಲ್ಲ. ನೋಡುವುದೂ ಇಲ್ಲ.
ಕಂಪೆನಿಯ ಪ್ರತಿಯೊಂದು ಹೆಜ್ಜೆಯಲ್ಲಿ ಅವರ ಸಲಹೆ, ಮಾರ್ಗದರ್ಶನ ಇದ್ದೇ ಇರುತ್ತದೆ’ ಎಂದು ಹೇಳಿದ್ದಾರೆ. ಮೂರ್ತಿ ಅವರು ಕಂಪೆನಿ ಸಂಸ್ಥಾಪಕರಷ್ಟೇ ಅಲ್ಲ. ಸಲಹೆಗಾರ ರಾಗಿ ಕಂಪೆನಿ ಜತೆ ಬಾಂಧವ್ಯ ಉಳಿಸಿಕೊಂಡಿದ್ದು, ಅದು ಮುಂದೆಯೂ ಹಾಗೇ ಇರಲಿದೆ ಎಂದಿದ್ದಾರೆ. ಇನ್ಫೋಸಿಸ್ ಕಾರ್ಪೊರೇಟ್ ಆಡಳಿತದ ಗುಣಮಟ್ಟದ ಬಗ್ಗೆ ಮೂರ್ತಿ ಅವರು ಪರೋಕ್ಷ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ವೆಂಕಟೇಶನ್ ಹೇಳಿಕೆಗೆ ಮಹತ್ವ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ