“ಪದ್ಮಾವತಿ’ ಬಗ್ಗೆ ಜೋಶಿ ಕಿಡಿ
Team Udayavani, Nov 19, 2017, 6:20 AM IST
ಮುಂಬಯಿ: “ಪದ್ಮಾವತಿ’ ಸಿನೆಮಾ ವಿವಾದ ಸದ್ಯಕ್ಕಂತೂ ತಣ್ಣಗಾಗು ವಂತೆ ಕಾಣುತ್ತಿಲ್ಲ. ಪ್ರಮಾಣಪತ್ರಕ್ಕೆಂದು ಬಂದಿದ್ದ ಸಿನೆಮಾ ವನ್ನು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ವಾಪಸ್ ಕಳುಹಿಸಿದ ಬೆನ್ನಲ್ಲೇ ಸಿಬಿಎಫ್ಸಿ ಮುಖ್ಯಸ್ಥ ಪ್ರಸೂನ್ ಜೋಶಿ ಅವರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಮಾಣ ಪತ್ರವನ್ನು ವಿತರಿಸುವ ಮೊದಲೇ ಚಿತ್ರದ ಸ್ಕ್ರೀನಿಂಗ್ ಮಾಡುತ್ತಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸೆನ್ಸಾರ್ ಸರ್ಟಿಫಿಕೇಟ್ ಸಿಗುವ ಮುನ್ನವೇ ಪದ್ಮಾವತಿ ನಿರ್ಮಾಪಕರು ಚಿತ್ರ ವನ್ನು ಮಾಧ್ಯಮಗಳ ಮುಂದೆ ಸ್ಕ್ರೀನಿಂಗ್ ಮಾಡಿದ್ದಾರೆ. ಅಲ್ಲದೆ, ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ಣಿ ಸೇನಾ ಸದಸ್ಯ ರಿಗೂ ಚಿತ್ರವನ್ನು ಪ್ರದರ್ಶಿ ಸಲು ಸಿದ್ಧತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಸಿಬಿಎಫ್ಸಿ ಮುಖ್ಯಸ್ಥ ಜೋಶಿ ಕೆಂಡವಾಗಿ ದ್ದಾರೆ. “ಸಿಬಿಎಫ್ಸಿ ಪ್ರಮಾಣಪತ್ರ ನೀಡುವ ಮೊದಲೇ ಮಾಧ್ಯಮಗಳಿಗೆ ಚಿತ್ರವನ್ನು ಪ್ರದರ್ಶಿಸ ಲಾಗಿದೆ. ಕೆಲವು ರಾಷ್ಟ್ರೀಯ ಚಾನೆಲ್ಗಳಲ್ಲಿ ಸಿನೆಮಾ ವಿಮರ್ಶೆಯೂ ಪ್ರಕಟ ವಾಗಿದೆ. ಇದು ಅತ್ಯಂತ ನಿರಾಶಾ ದಾಯಕ ವಿಚಾರ. ಸಿನೆಮಾ ಬಿಡುಗಡೆಗೆ ನಿರ್ದಿಷ್ಟ ವ್ಯವಸ್ಥೆಯೊಂದಿರುವಾಗ, ಅದರೊಂದಿಗೆ ರಾಜಿ ಮಾಡಿಕೊಳ್ಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.
ಮತ್ತೂಂದು ಕೋಟೆ ಪ್ರವೇಶಕ್ಕೂ ತಡೆ ಈ ನಡುವೆ, ಶುಕ್ರವಾರ ರಾಜಸ್ಥಾನದ ಜೈಪುರದ ಚಿತ್ತೋರ್ಗಢ ಕೋಟೆ ಪ್ರವೇಶಕ್ಕೆ ತಡೆ ನೀಡಿದ್ದ ಕರ್ಣಿ ಸೇನಾ ಸದಸ್ಯರು ಶನಿವಾರ ಇಲ್ಲಿನ ಮತ್ತೂಂದು ಕೋಟೆ ಯಾದ ಕುಂಭಳಗಢದ ಪ್ರವೇಶಕ್ಕೂ ಪ್ರವಾಸಿಗರಿಗೆ ಅವಕಾಶ ನೀಡದೇ ಪ್ರತಿಭಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!