ಶಬರಿಮಲೆಗೆ ರೈಲು ಸಂಪರ್ಕ ಕಲ್ಪಿಸಲು ಕೇರಳ ಸರಕಾರ ಹಿಂದೇಟು
Team Udayavani, Jan 12, 2020, 8:54 PM IST
ನವದೆಹಲಿ: ಪುಣ್ಯಕ್ಷೇತ್ರ ಶಬರಿಮಲೆಗೆ ರೈಲ್ವೆ ಸಂಪರ್ಕ ಕಲ್ಪಿಸಲು ಕೇರಳ ಸರ್ಕಾರ ಸಹಕಾರ ನೀಡುತ್ತಿಲ್ಲ. ಸಾಕಷ್ಟು ವಿಳಂಬ ಮಾಡುತ್ತಿರುವುದರಿಂದ ಭಾರೀ ವೆಚ್ಚ ಭರಿಸಬೇಕಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಅವರು, ಶಬರಿಮಲೆ ಸಮೀಪ ಯಾವುದೇ ರೈಲ್ವೆ ನಿಲ್ದಾಣವಿಲ್ಲ. ಕೊಟ್ಟಾಯಂ, ತಿರುವಳ್ಳ, ಚೆಂಗನೂರು ರೈಲ್ವೆ ನಿಲ್ದಾಣಗಳು ಶಬರಿಮಲೆಯಿಂದ 90 ಕಿ.ಮೀ. ದೂರ ಇವೆ. 1997ರಲ್ಲಿ 111 ಕಿ.ಮೀ. ಉದ್ದದ ಅಂಗಮಾಲಿ-ಶಬರಿಮಲೆ ರೈಲ್ವೆ ಸಂಪರ್ಕಕ್ಕೆ ಯೋಜನೆ ರೂಪಿಸಲಾಗಿತ್ತು. ಅಂದು ಇದಕ್ಕೆ 550 ಕೋಟಿ ರೂ. ವೆಚ್ಚವಾಗುತ್ತಿತ್ತು. ಆದರೆ, ವಿಳಂಬದಿಂದ ಇಂದು ಈ ವೆಚ್ಚವು 1,566 ಕೋಟಿ ರೂ. ತಲುಪಿದೆ. ಶೇ. 512ರಷ್ಟು ವೆಚ್ಚ ಏರಿಕೆಯಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ