ಲಾಲು ಝಡ್ ಪ್ಲಸ್ ಭದ್ರತೆ ವಾಪಸ್, ತೇಜ್ ಪ್ರತಾಪ್ ಖಂಡನೆ
Team Udayavani, Nov 27, 2017, 3:29 PM IST
ಪಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ಗೆ ನೀಡಲಾಗಿದ್ದ ಎನ್ಎಸ್ಜಿ ಕಮಾಂಡೋಗಳ “ಝಡ್ ಪ್ಲಸ್’ ಕೆಟಗರಿಯ ಭದ್ರತೆಯನ್ನು ಸರಕಾರ ಹಿಂದೆಗೆದುಕೊಂಡಿದೆ. ಲಾಲುಗೆ ಈಗಿನ್ನು ರಾಜ್ಯ ಸರಕಾರ ನೀಡುವ ಝಡ್ ಕೆಟಗರಿಯ ಭದ್ರತೆ ಮಾತ್ರವೇ ಸಿಗಲಿದೆ.
ಲಾಲು ಪ್ರಸಾದ್ ಯಾದವ್ಗೆ ನೀಡಲಾಗಿದ್ದ ಎಲ್ಲ ಎನ್ಎಸ್ಜಿ ಕಮಾಂಡೋಗಳ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿದ್ದು ಈಗಿನ್ನು ಸಿಆರ್ಪಿಎಫ್ ದಳ ಲಾಲು ಭದ್ರತೆಯ ಜವಾಬ್ದಾರಿ ನಿಭಾಯಿಸಲಿದೆ. ಇದು ಝಡ್ ಕೆಟಗರಿಯ ಭದ್ರತೆಯಾಗಲಿದ್ದು ಅದು ರಾಜ್ಯ ಪೊಲೀಸ್ ದಳದ ಹೊಣೆಗಾರಿಕೆಯಾಗಿರುತ್ತದೆ ಎಂದು ವರದಿಗಳು ತಿಳಿಸಿವೆ.
ಈ ಬೆಳವಣಿಗೆಗೆ ಲಾಲು ಅವರ ಪುತ್ರ, ಮಾಜಿ ಬಿಹಾರ ಸಚಿವ, ತೇಜ್ ಪ್ರತಾಪ್ ಅವರು ಕೋಪಾವಿಷ್ಟರಾಗಿ ಪ್ರತಿಕ್ರಿಯಿಸಿದ್ದಾರೆ.
“ನಮ್ಮ ತಂದೆಗೆ ದೇವರ ದೆಯೆಯಿಂದ ಯಾವುದೇ ಅಗದಿರಲಿ; ಒಂದೊಮ್ಮೆ ಆಯಿತೆಂದಾದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಅವರೇ ಕಾರಣರಾಗುತ್ತಾರೆ’ ಎಂದು ತೇಜ್ ಪ್ರತಾಪ್ ಗುಡುಗಿದ್ದಾರೆ.
“ಇದು ನಮ್ಮ ತಂದೆಯ ವಿರುದ್ಧ (ಲಾಲು ಯಾದವ್) ನಡೆಸಲಾಗಿರುವ ಕೊಲೆ ಪಿತೂರಿ’ ಎಂದು ಹೇಳುವ ಮೂಲಕ ತೇಜ್ ಪ್ರತಾಪ್, ಪ್ರಧಾನಿ ಮೋದಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಇದೇ ವೇಳೆ ಕೇಂದ್ರ ಗೃಹ ಸಚಿವಾಲಯ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ರಾಮ್ ಮಾಂಜಿ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಕೆಟಗರಿಯ ಭದ್ರತೆಯನ್ನು ಕೂಡ ಹಿಂದೆಗೆದುಕೊಂಡಿದೆ. ಮಾಂಜಿ ಅವರಿಗೆ ಝಡ್ ಪ್ಲಸ್ ಭದ್ರತೆ ಇರುತ್ತಾ ಸಿಆರ್ಪಿಎಫ್ ಭದ್ರತೆಯೂ ಜಾರಿಯಲ್ಲಿತ್ತು !
ಲಾಲು ಪುತ್ರ ತೇಜ್ ಪ್ರತಾಪ್ ನಿನ್ನೆ ಭಾನುವಾರ “ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಪುತ್ರನ ವಿವಾಹ ಕಾರ್ಯಕ್ರಮವನ್ನು ಹಾಳುಗೆಡಹುವ’ ಬೆದರಿಕೆಯನ್ನು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ತೇಜ್ ಪ್ರತಾಪ್, “ನಾನೇನೂ ಕ್ರಿಮಿನಲ್ ಅಥವಾ ಭಯೋತ್ಪಾದಕನಲ್ಲ’ ಎಂದು ಹೇಳಿ “ಸುಶೀಲ್ ಕುಮಾರ್ ಮೋದಿ ಅವರು ನಿರ್ಭಯರಾಗಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ನಡೆಸಬಹುದಾಗಿದೆ’ ಎಂದು ಹೇಳಿದ್ದರು.
ತೇಜ್ ಪ್ರತಾಪ್ ಯಾದವ್ ಹಾಕಿದ್ದರು ಎನ್ನಲಾದ ಬೆದರಿಕೆಯ ಹಿನ್ನೆಲೆಯಲ್ಲಿ “ಭದ್ರತೆಯ ಕಾರಣಗಳಿಗೆ ಡಿ.3ರಂದು ರಾಜೇಂದ್ರ ನಗರದಲ್ಲಿನ ಶಾಖಾ ಮೈದಾನದಲ್ಲಿ ನಡೆಯಲು ತೀರ್ಮಾನಿಸಲಾಗಿದ್ದ ಪುತ್ರನ ಮದುವೆಯನ್ನು ಇದೀಗ ನಾವು ಪಟ್ನಾ ವಿಮಾನ ನಿಲ್ದಾಣ ಸಮೀಪದ ವೆಟೆರಿನರಿ ಕಾಲೇಜ್ ಗ್ರೌಂಡ್ ತಾಣಕ್ಕೆ ಬದಲಾಯಿಸಿದ್ದೇವೆ’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ