80 ವರ್ಷ ಬಳಿಕ ಟಿಟಿಡಿಗೆ ಭೂ ಗೆಲುವು
Team Udayavani, Sep 8, 2019, 5:50 AM IST
ತಿರುಪತಿ: ಬರೋಬ್ಬರಿ 80 ವರ್ಷಗಳ ಕಾನೂನು ಹೋರಾಟದ ಬಳಿಕ ತನ್ನ 188 ಎಕರೆ ಭೂಮಿಯನ್ನು ಮರಳಿ ಪಡೆಯುವಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯಶಸ್ವಿಯಾಗಿದೆ. ಸದ್ಯದಲ್ಲೇ 1ಸಾವಿರ ಕೋಟಿ ರೂ. ಮೌಲ್ಯದ ಈ ಜಮೀನು ದೇವಸ್ಥಾನದ ಪಾಲಾಗಲಿದೆ.
ತಿರುಪತಿಯ ಈಶಾನ್ಯ ಭಾಗ ದಲ್ಲಿರುವ ಈ ಜಮೀನಿಗಾಗಿ 1940ರಿಂದಲೂ ಕಾನೂನು ಹೋರಾಟ ನಡೆದಿತ್ತು. 1865ರಲ್ಲಿ ಸಂತ, ಕವಿ ಹಾಗೂ ಸಂಗೀತಗಾರ ತಲ್ಲಪಾಕ ಅನ್ನಮಾಚಾರ್ಯ ಅವರ ವಂಶ ದವರಿಗೆ ತಿರುಮಲ ತಿರುಪತಿ ದೇವ ಸ್ಥಾನಂ 188 ಎಕರೆ 32 ಸೆಂಟ್ಸ್ ಭೂಮಿಯನ್ನು “ಸೇವಾ ಇನಾಮು’ ರೂಪದಲ್ಲಿ ನೀಡಿತ್ತು. ದೇವಸ್ಥಾನದಲ್ಲಿ ದಿವ್ಯನಾಮ ಸಂಕೀರ್ತನ ಸೇವೆಗಾಗಿ ಈ ಭೂಮಿ ನೀಡಲಾಗಿತ್ತು. ಎಲ್ಲಿಯವರೆಗೆ ಆ ಕುಟುಂಬ ಈ ಸೇವೆ ಸಲ್ಲಿಸುತ್ತದೋ ಅಲ್ಲಿಯವರೆಗೂ ಭೂಮಿಯ ಮಾಲಕತ್ವ ಅವರ ಕೈಯ್ಯಲಿರುತ್ತದೆ. ಎಂಬ ಷರತ್ತು ವಿಧಿಸಲಾಗಿತ್ತು.
ಆದರೆ 1925ರಲ್ಲಿ ಸೇವೆ ನಿಲ್ಲಿಸಿ ದರೂ ಅನ್ನಮಾಚಾರ್ಯ ಕುಟುಂಬವು ಭೂಮಿಯನ್ನು ವಾಪಸ್ ನೀಡಲಿಲ್ಲ. ಅಷ್ಟೇ ಅಲ್ಲದೆ, ರಾಜಕೀಯವಾಗಿ ಪ್ರಭಾವಿಯಾಗಿದ್ದ ಪಿ.ಎಸ್.ಗುರವ ರೆಡ್ಡಿಗೆ ಆ ಜಮೀನನ್ನು 1927ರಲ್ಲಿ ಲೀಸ್ಗೆ ನೀಡ ಲಾ ಗಿತ್ತು. ಇದನ್ನು ಪ್ರಶ್ನಿಸಿ ಟಿಟಿಡಿ 1940ರಲ್ಲಿ ಸಬ್ ಕಲೆ ಕ್ಟರ್ ಮೊರೆ ಹೋಗಿತ್ತು. ದೀರ್ಘ ವಿಚಾರಣೆ ಬಳಿಕ ಈಗ ತೀರ್ಪು ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ