ಸರ್ದಾರ್ಜಿಖಲಿಸ್ತಾನಿ,ನಾವು ಪಾಕಿಸ್ತಾನಿ,ಕೇವಲ ಬಿಜೆಪಿ ಮಾತ್ರ ಹಿಂದೂಸ್ತಾನಿ|ಮೆಹಬೂಬಾ ಮುಫ್ತಿ
Team Udayavani, Sep 21, 2021, 5:24 PM IST
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಮಾಧ್ಯಮಗಳಿಗೆ ನೀಡಿರುವ ಸಂದರ್ಶನಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿರುವ ಮುಫ್ತಿ, ಜವಾಹರಲಾಲ್ ನೆಹರೂ ಹಾಗೂ ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ದೂರದೃಷ್ಟಿ ಹೊಂದಿದ್ದರು. ಆದರೆ, ಸದ್ಯದ ಕೇಂದ್ರ ಸರ್ಕಾರ ಹಿಂದೂ ಮತ್ತು ಮುಸ್ಲಿಂರ ನಡುವೆ ಒಡಕು ಮೂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಕುಳಿತಿರುವವರು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರವನ್ನು ಪ್ರಯೋಗಾಲಯವಾಗಿ ಬಳಸಿಕೊಂಡು ಇಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರದ ಬಗ್ಗೆ ಜವಾಹರ್ ಲಾಲ್ ನೆಹರೂ ಹಾಗೂ ಅಟಲ್ ಬಿಹಾರಿ ವಾಜಪೇಯಿಯಂತಹ ನಾಯಕರು ಒಳ್ಳೆಯ ದೃಷ್ಠಿಕೋನ ಹೊಂದಿದವರಾಗಿದ್ದರು. ಆದರೆ, ಈ ಸರ್ಕಾರ ಹಿಂದೂ ಮತ್ತು ಮುಸ್ಲಿಂರನ್ನು ಒಡೆದು ಆಳುತ್ತಿದೆ. ಸರ್ದಾಜಿಗಳು ಖಲಿಸ್ತಾನಿ, ನಾವು ಪಾಕಿಸ್ತಾನಿ, ಕೇವಲ ಬಿಜೆಪಿ ಮಾತ್ರ ಹಿಂದೂಸ್ತಾನಿ ಎನ್ನುವಂತೆ ವರ್ತಿಸುತ್ತಿದೆ ಎಂದು ಮುಫ್ತಿ ಹೇಳಿದ್ದಾರೆ.
ಇನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೆ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದ ಮುಫ್ತಿ, ಚುನಾವಣೆಗಳು ಸಮೀಪಿಸುತ್ತಿವೆ. ಈ ಬಾರಿ ಬಿಜೆಪಿ ಪಕ್ಷವು ತಾಲಿಬಾನ್ ಹಾಗೂ ಅಫ್ಗಾನಿಸ್ತಾನ್ ವಿಷಯಗಳನ್ನು ರಾಜಕೀಯ ವಿಷಯವಾಗಿ ಬಳಸಿಕೊಳ್ಳಲಿದೆ. ಒಂದು ವೇಳೆ ಇವು ವರ್ಕೌಟ್ ಆಗದಿದ್ದರೆ, ಪಾಕಿಸ್ತಾನ್ ವಿಷಯಗಳನ್ನು ಎಳೆದು ತರುತ್ತದೆ ಎಂದು ದೂರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sadhguru; ಕಾವೇರಿ ಕಾಲಿಂಗ್ ಮೂಲಕ 10.9 ಕೋಟಿ ಸಸಿಗಳ ನಾಟಿ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು