ಮಾಂಸ ಬಿಡಿ, ಸಂಗಾತಿ ಜತೆ ಬೆರೆಯಬೇಡಿ! ಕೇಂದ್ರ ಸಚಿವಾಲಯದ ಸಲಹೆ
Team Udayavani, Jun 14, 2017, 10:39 AM IST
ನವದೆಹಲಿ: ಮಾಂಸಾಹಾರ ಸೇವಿಸಬೇಡಿ, ಸಂಗಾತಿಯೊಂದಿಗೆ ಸೇರಬೇಡಿ, ಕೆಟ್ಟವರ ಸಹವಾಸ ಬೇಡ, ಆಧ್ಯಾತ್ಮ ಚಿಂತನೆ ಇರಲಿ ಹಾಗೂ ಕೋಣೆಯ ಗೋಡೆಗಳಿಗೆ ಸುಂದರವಾದ ಚಿತ್ರಗಳನ್ನು ನೇತು ಹಾಕಿ ಮತ್ತು ಆರೋಗ್ಯವಂತ ಮಗುವಿಗೆ ಜನ್ಮನೀಡಿ!
ವಾರ್ಷಿಕ 2.6 ಕೋಟಿ ಮಕ್ಕಳಿಗೆ ಜನ್ಮ ನೀಡುವ ಭಾರತದ ಗರ್ಭಿಣಿಯರಿಗೆ ಕೇಂದ್ರ ಆಯುಷ್ ಸಚಿವಾಲಯ ನೀಡಿರುವ ಸಲಹೆಗಳಿವು. ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಆಯುಷ್ ಸಚಿವ ಶ್ರೀಪಾದನಾಯಕ್ ಅವರು ಬಿಡುಗಡೆ ಮಾಡಿದ “ಮದರ್ ಆಂಡ್ ಚೈಲ್ಡ್ ಕೇರ್’ ಎಂಬ ಕಿರುಪುಸ್ತಕದಲ್ಲಿ ಈ ಸಲಹೆಗಳಿವೆ. ಆದರೆ ಈ ಸಲಹೆಗಳನ್ನು ಅವೈಜ್ಞಾನಿಕ ಎಂದಿರುವ ತಜ್ಞವೈದ್ಯರು, “ಪ್ರೋಟೀನ್ ಕೊರತೆ, ರಕ್ತಹೀನತೆ ಮತ್ತು ಅಪೌಷ್ಠಿಕತೆ ಸಮಸ್ಯೆಗಳು
ಗರ್ಭಿಣಿಯನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಾಗಿದ್ದು, ಪ್ರೋಟೀನ್ ಮತ್ತು ಕಬ್ಬಿಣದ ಅಂಶಗಳಿಂದ ಶ್ರೀಮಂತವಾಗಿರುವ ಮಾಂಸ ಈ ಸಮಸ್ಯೆಗಳ ಪರಿಹಾರಕ್ಕೆ ಅತ್ಯುತ್ತಮ ಆಹಾರವಾಗಿದೆ. ಇನ್ನು ಗರ್ಭದಲ್ಲಿರುವ ಮಗು ಆಮ್ನಿಯಾಟಿಕ್ ದ್ರವ ಹಾಗೂ ಗರ್ಭಕೋಶದ ಸ್ನಾಯುಗಳಿಂದ ಸುತ್ತುವರಿದು, ಸುರಕ್ಷಿತವಾಗಿರುತ್ತದೆ, ಆತಂಕ ಬೇಡ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ