ಹೌದಿನಿ ಮ್ಯಾಜಿಕ್ ಮಾಡಲು ಗಂಗೆಗೆ ಧುಮುಕಿದ ಕೋಲ್ಕತ ಮಾಂತ್ರಿಕ ನೀರು ಪಾಲು ?
Team Udayavani, Jun 17, 2019, 12:22 PM IST
ಕೋಲ್ಕತ : ವಿಶ್ವ ಪ್ರಸಿದ್ಧ ಮಾಂತ್ರಿಕ ಹ್ಯಾರಿ ಹೌದಿನಿಯ ಅತ್ಯಂತ ಅಪಾಯಕಾರಿ ಅಂಡರ್ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲು ಯತ್ನಿಸಿದ ಸ್ಥಳೀಯ ಮಾಂತ್ರಿಕ ಚಂಚಲ್ ಲಾಹಿರಿ ಅವರು ನಿನ್ನೆ ಭಾನುವಾರ ಕೈಕಾಲುಗಳನ್ನು ಸಂಕೋಲೆಯಿಂದ ಬಿಗಿದುಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಬಂಧಿಯಾಗಿ ಸಾರ್ವಜನಿಕರ ಸಮ್ಮುಖದಲ್ಲಿ ಇಲ್ಲಿನ ಹೌರಾ ಸೇತುವೆಯ 28ನೇ ಪಿಲ್ಲರ್ ಕೆಳಗಿಂದ ಗಂಗಾ ನದಿಗೆ ಧುಮುಕಿದ್ದರು.
ಆದರೆ ನಿಗದಿತ ಸಮಯ ಮೀರಿದರೂ ಬಂಧಮುಕ್ತರಾಗಿ ನದಿಯಿಂದ ಮೇಲೆ ಬರುವಲ್ಲಿ ಲಾಹಿರಿ ವಿಫಲರಾಗುವ ಮೂಲಕ ಮ್ಯಾಜಿಕ್ ದರ್ಶಕರಲ್ಲಿ ತೀವ್ರ ಚಿಂತೆ, ಕಳವಳ, ನಿರಾಶೆ ಉಂಟು ಮಾಡಿದ್ದರು.
ಮ್ಯಾಜಿಶಿಯನ್ ಚಂಚಲ್ ಲಾಹಿರಿ ಅವರು ಎಷ್ಟು ಹೊತ್ತಾದರೂ ನದಿಯಿಂದ ಮೇಲೆ ಬಾರದಿದ್ದಾಗ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಪೊಲೀಸರು ಮುಳುಗು ಪರಿಣರನ್ನು ಕರೆಸಿಕೊಂಡು ಶೋಧ ಕಾರ್ಯ ನಡೆಸಿದರು. ಆದರೂ ಚಂಚಲ್ ಪತ್ತೆಯಾಗಲಿಲ್ಲ.
ನಿನ್ನೆ ಭಾನುವಾರ ಕತ್ತಲಾದ ಬಳಿಕ ಶೋಧ ಕಾರ್ಯ ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಸೋಮವಾರ ಮತ್ತೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾವುದೇ ಸುರಕ್ಷಾ ಸೌಕರ್ಯಗಳನ್ನು ಹೊಂದದೆ ಚಂಚಲ್ ಅವರು ಈ ಅಪಾಯಕಾರಿ ಮ್ಯಾಜಿಕ್ ಮಾಡಲು ಅವರಿಗೆ ಅನುಮತಿ ಕೊಟ್ಟವರು ಯಾರು ಎಂಬುದನ್ನು ಪೊಲೀಸರು ಈಗ ತನಿಖೆ ಮಾಡುತ್ತಿದ್ದಾರೆ.
ಬಂಧಿಯಾಗಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನದಿಗೆ ಧುಮುಕಿದ್ದ ಮಾಂತ್ರಿಕ ಚಂಚಲ್ ಬಹುತೇಕ ಗಂಗಾ ಪ್ರವಾಹದಲ್ಲಿ ಕೊಚ್ಚಿ ಹೋಗಿರಬೇಕೆಂದು ಶಂಕಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!