ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರಕ್ಕೆ ನನ್ನನ್ನು ಕರೆದರು : ಅಧಿಕಾರಿ ಆಪ್ತ.!
Team Udayavani, Mar 27, 2021, 2:05 PM IST
ನವದೆಹಲಿ : ಮಮತಾ ಬ್ಯಾನರ್ಜಿ ತಮ್ಮ ಪರ ಪ್ರಚಾರ ಮಾಡಲು ಮತ್ತು ಟಿಎಮ್ ಸಿಯನ್ನು ಗೆಲ್ಲಿಸಿಕೊಡಲು ತನ್ನನ್ನು ಕರೆದಿರುವುದಾಗಿ ಸುವೇಂದು ಅಧಿಕಾರಿ ಆಪ್ತ ಪ್ರಲಯ್ ಪಾಲ್ ಶನಿವರ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿಯು ಶನಿವಾರ ಬೆಳಗ್ಗೆ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಆ ವಿಡಿಯೋದಲ್ಲಿ ಪ್ರಲಯ್ ಪಾಲ್ ಅವರಿಗೆ ಮಮತಾ ಬ್ಯಾನರ್ಜಿ ಕರೆ ಮಾಡಿ, ನಂದಿಗ್ರಾಮ ಚುನಾವಣೆ ಗೆಲುವಿಗೆ ಸಹಾಯ ಮಾಡುವಂತೆ ಕೇಳಿದ್ದಾರೆ. ಆದ್ರೆ ಈ ಬಗ್ಗೆ ಆರೋಪ ಮಾಡಿರುವ ಟಿಎಮ್ ಸಿ ಪಕ್ಷವು, ವಿಡಿಯೋದಲ್ಲಿನ ಆಡಿಯೋವನ್ನು ಪರಿಶೀಲಿಸಿಲ್ಲ ಎಂದಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಪ್ರಲಯ್ ಪಾಲ್, ಮಮತಾ ಬ್ಯಾನರ್ಜಿ ಮತ್ತೆ ನಮ್ಮ ಪಕ್ಷಕ್ಕೆ ಬನ್ನಿ ಎಂದರು. ಆದ್ರೆ ನಾನು ಸುವೇಂದು ಅಧಿಕಾರಿ ಮತ್ತು ಅವರ ಕುಟುಂಬದೊಂದಿದೆ ನಿಕಟ ಸಂಬಂಧ ಹೊಂದಿರುವ ಕಾರಣ ಟಿಎಂಸಿಗೆ ಬರಲು ಸಾಧ್ಯವಿಲ್ಲ. ಅಲ್ಲದೆ ನಾನು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಲಯ್ ಹೇಳಿದ್ದಾರೆ.
ಮತ್ತೊಂದು ಮಾಹಿತಿ ಹೇಳಿರುವ ಬಿಜೆಪಿ ನಾಯಕ, ಸಿಪಿಐ (ಎಂ) ನಂದಿಗ್ರಾಮದ ಜನರನ್ನು ಹಿಂಸಿಸುತ್ತಿದ್ದಾಗ, ನಮ್ಮೊಂದಿಗೆ ನಿಂತವರು ಅಧಿಕಾರಿ ಕುಟುಂಬ. ನಾನು ಅವರ ವಿರುದ್ಧ ಎಂದಿಗೂ ಹೋಗಿಲ್ಲ ಮತ್ತು ಆ ರೀತಿಯ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ