ಜಿರಳೆಗಳ ಕಾಟ : ಪತ್ನಿಗೆ ಡಿವೋರ್ಸ್ ಕೇಳಿದ ಪತಿರಾಯ!
Team Udayavani, Apr 17, 2021, 1:35 PM IST
ಭೋಪಾಲ್ : ಗಂಡ ಅಥವಾ ಹೆಂಡತಿ ತಮ್ಮ ನಡುವೆ ಸಾಮರಸ್ಯ ಇಲ್ಲದೆ, ತುಂಬಾ ಜಗಳಗಳು ಆದಾಗ ವಿವಾಹ ವಿಚ್ಛೇದನಕ್ಕೆ ಮುಂದಾಗುತ್ತಾರೆ. ಆದ್ರೆ ಮನೆಯಲ್ಲಿ ಜಿರಳೆ ಕಾಟ ಎಂಬ ಕಾರಣಕ್ಕೆ ಡಿಪೋರ್ಸ್ ಕೇಳಿರುವ ವ್ಯಕ್ತಿಯನ್ನು ನೀವೆಲ್ಲಾದರು ನೋಡಿದ್ದೀರಾ?. ಆದ್ರೆ ಅಂತಹ ಪ್ರಕರಣ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಹೌದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ದಂಪತಿಗಳು ಮದುವೆಯಾದ ಮೂರು ವರ್ಷಕ್ಕೆ ಬರೋಬ್ಬರಿ 18 ಬಾರಿ ಮನೆಗಳನ್ನು ಬದಲಾಯಿಸಿದ್ದಾರೆ. ಯಾಕಂದ್ರೆ ಹೆಂಡತಿಗೆ ಜಿರಳೆಗಳು ಅಂದ್ರೆ ಇನ್ನಿಲ್ಲದ ಭಯ. ಈ ಕಾರಣದಿಂದ ಒಂದಾದ ಮೇಲೆ ಒಂದರಂತೆ ಮೂರೇ ವರ್ಷಕ್ಕೆ 18 ಬಾರಿ ಮನೆಯನ್ನು ಬದಲಾಯಿಸಿದ್ದಾರೆ.
ಆ ಪತಿಗೆ ತನ್ನ ಹೆಂಡತಿಗೆ ಜಿರಳೆ ಕಂಡರೆ ಇಷ್ಟೊಂದು ಭಯ ಇದೆ ಎಂದು ಮದುವೆಗೂ ಮುಂಚೆ ಗೊತ್ತಿರಲಿಲ್ಲವಂತೆ. ಮದುವೆಯಾದ ನಂತರ ಅಡುಗೆ ಮಾಡಲು ಅಡುಗೆ ಕೋಣೆಗೆ ಹೋದ ಮೇಲೆ ಅಲ್ಲಿ ಇದ್ದ ಜಿರಳೆಗಳನ್ನು ಕಂಡು ಜೋರಾಗಿ ಕಿರುಚುತ್ತ ಹೊರಗಡೆ ಓಡಿ ಬಂದ ನಂತರ ಈ ವಿಚಾರ ತಿಳಿದಿದೆ.
ಇದಾದ ಮೇಲೆ ನಾನು ಜಿರಳೆ ಇರುವ ಅಡುಗೆ ಮನೆಗೆ ಹೋಗುವುದಿಲ್ಲ ಎಂದು ಪತ್ನಿಯು ಹಠ ಹಿಡಿದಿದ್ದಾಳೆ. ಇದನ್ನು ಕಂಡ ಪತಿಯು ತನ್ನ ಮನೆಯನ್ನೇ ಬದಲಾಯಿಸಿದ್ದಾನೆ. 2017ರಲ್ಲಿ ಈ ದಂಪತಿ ಮದುವೆಯಾಗಿದ್ದು, ಮೊದಲ ಬಾರಿಗೆ 2018ರಲ್ಲಿ ತಮ್ಮ ಮನೆಯನ್ನು ಬದಲಾಯಿಸಿದ್ದಾರೆ.
ಮನೆ ಬದಲಾಯಿಸಿ ಬದಲಾಯಿಸಿ ಬೇಸರಗೊಂಡ ಪತಿರಾಯ ತನ್ನ ಮಡದಿಗೆ ವಿಚ್ಛೇದನ ಕೊಡಲು ನಿರ್ಧರಿಸಿದ್ದಾನಂತೆ. ಇದಕ್ಕೂ ಮೊದಲು ತನ್ನ ಹೆಂಡತಿಯನ್ನು ಅನೇಕ ಬಾರಿ ವೈದ್ಯರ ಬಳಿ ಕರೆದು ಕೊಂಡು ಹೋಗಿ ಜಿರಳೆ ಭಯಕ್ಕೆ ಚಿಕಿತ್ಸೆಯನ್ನೂ ಕೊಡಿಸಿದ್ದಾನಂತೆ. ಆದ್ರೆ ಏನು ಮಾಡಿದರೂ ಆ ಭಯ ಕಡಿಮೆಯಾಗಿಲ್ಲದ ಕಾರಣ ಬೇಸರಗೊಂಡು ಡಿವೋರ್ಸ್ ನೀಡಲು ಮುಂದಾಗಿದ್ದಾನೆ.
ಜಿರಳೆಗಳಿಂದ ಆಗುವ ಭಯವನ್ನು ಕಟ್ಸರಿಡಾಫೋಬಿಯಾ ಎಂದು ಕರೆಯಲಾಗುತ್ತದೆ. ಅದರಿಂದ ಬಳಲುತ್ತಿರುವ ವ್ಯಕ್ತಿಗಳು ಕಾಲ ಕ್ರಮೇಣ ದುರ್ಬಲರಾಗಬಹುದು. ಕಟ್ಸರಿಡಾಫೋಬಿಯಾದಂತಹ ಅರಿವಿನ ವರ್ತನೆಯ ಚಿಕಿತ್ಸೆಯನ್ನು ಬಳಸಿಕೊಂಡು ಕ್ರಮೇಣ ಡಿಸೆಂಟೈಸೇಶನ್ ವಿಧಾನದ ಮೂಲಕ ಇವರಿಗೆ ಚಿಕಿತ್ಸೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!