ಮುಂಬಯಿ-ಅಹಮದಾಬಾದ್ ರೈಲಿಗೆ ಕೋವಿಡ್ ಕಾಟ; ವೇಗ ಕಳೆದುಕೊಂಡ ಬುಲೆಟ್ ರೈಲು
ಎಂಟು ವರ್ಷ ವಿಳಂಬ; ಲಾಕ್ಡೌನ್ನಿಂದ ತಾಂತ್ರಿಕ ಸಮಸ್ಯೆ, ಭೂ ಸ್ವಾಧೀನ ತಡ
Team Udayavani, Sep 6, 2020, 6:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂಬಯಿ- ಅಹಮ ದಾಬಾದ್ ನಡುವಣ ಬುಲೆಟ್ ರೈಲು ಯೋಜನೆ ಪೂರ್ಣಗೊಳ್ಳುವುದು 8 ವರ್ಷ ವಿಳಂಬವಾಗಲಿದೆ. ಇದಕ್ಕೆ ಕಾರಣ ಕೋವಿಡ್. ಲಾಕ್ಡೌನ್ನಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಅದಲ್ಲದೆ ಈ ಯೋಜನೆಗೆ ಅಂದಾಜಿಸಿದ್ದಕ್ಕಿಂತ ದುಬಾರಿ ವೆಚ್ಚ ತಗಲಲಿದೆ. ಇದೆಲ್ಲದರ ಪರಿಣಾಮವಾಗಿ 508 ಕಿ.ಮೀ. ದೂರದ ಮುಂಬಯಿ-ಅಹಮದಾಬಾದ್ ಅತೀ ವೇಗದ ಕಾರಿಡಾರ್ ಯೋಜನೆಯು 2028ರ ಅಕ್ಟೋಬರ್ಗಷ್ಟೇ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ರೈಲ್ವೇ ನಿಗಮದ ಮೂಲಗಳ ಮಾಹಿತಿಯನ್ನು ಆಧರಿಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಜಪಾನ್ ಕಂಪೆನಿಗಳ ಜತೆ ಚರ್ಚೆ ನಡೆಸಿ, ಈ ಯೋಜನೆ ಪೂರ್ಣಗೊಳಿಸುವ ಬಗ್ಗೆ ಪರಿಷ್ಕೃತ ಸಮಯ ನಿಗದಿಪಡಿಸಲಾಗುವುದು. ಪ್ರಕ್ರಿಯೆ ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದರೆ ಬೇಗ ಯೋಜನೆ ಯನ್ನು ಪೂರ್ಣಗೊಳಿಸಬಹುದು. ಆದರೆ ಕೊರೊನಾ ಬಿಕ್ಕಟ್ಟಿನಂಥ ತಾಂತ್ರಿಕ ಸಮಸ್ಯೆ ಗಳು ಇದ್ದು, ನಿಗದಿತ ಸಮಯದಲ್ಲಿ ಯೋಜನೆ ಮುಗಿಸಲು ಆಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
508 ಕಿ.ಮೀ. ಭೂಗತ ಮಾರ್ಗ!
508 ಕಿ.ಮೀ. ಪೈಕಿ 21 ಕಿ.ಮೀ. ಸಂಪರ್ಕ ಜಾಲವನ್ನು ಭೂಗತವಾಗಿ ನಿರ್ಮಿಸಬೇಕಾಗಿದೆ. ಇದರಲ್ಲಿ 5 ಕಿ.ಮೀ. ಜಾಲವು ಮುಂಬಯಿಯ ಸಮುದ್ರದ ಕೆಳಗೆ ಹಾದು ಹೋಗಬೇಕಿದೆ. ಈ ಕ್ಲಿಷ್ಟಕರ 21 ಕಿ.ಮೀ. ಸಂಪರ್ಕ ಜಾಲವನ್ನು ನಿರ್ಮಿಸಲು 60 ತಿಂಗಳು ಸಮಯ ಬೇಕಾಗುತ್ತದೆ. ಈ ಕುರಿತು ಜಪಾನ್ ಕಂಪೆನಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಲ್ಲದೇ ಜಪಾನ್ ಕಂಪೆನಿಗಳು ಕಾರ್ಯಗತಗೊಳಿಸಬೇಕಿದ್ದ 11 ಟೆಂಡರ್ಗಳಲ್ಲಿ ಯೋಜನಾ ಸಲಹೆಗಾರರು ಅಂದಾಜಿಸಿದ್ದಕ್ಕಿಂತ ಶೇ.90ರಷ್ಟು ಹೆಚ್ಚು ಬೆಲೆಯನ್ನು ನಮೂದಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ನೀಡಲು ಭಾರತ ನಿರಾಕರಿಸಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ