ಕಿಡ್ನಿಯಲ್ಲಿ ಹತ್ತಿಯನ್ನು ಬಿಟ್ಟ ಆಸ್ಪತ್ರೆಗೆ ದಂಡ
Team Udayavani, Sep 27, 2019, 4:01 AM IST
ಮುಂಬಯಿ: 3 ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಹತ್ತಿಯನ್ನು ಮೂತ್ರ ಕೋಶದಲ್ಲೇ ಬಿಟ್ಟು ಕಿಡ್ನಿಗೆ ಹಾನಿಯಾಗಿದ್ದಕ್ಕೆ ಮುಂಬಯಿನ ಆಸ್ಪತ್ರೆಗೆ 18 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಕೆಯ ಬಾಲ್ಯದ ಖುಷಿಯನ್ನು ನೀವು ಕಳೆದಿದ್ದೀರಿ ಎಂದಿರುವ ಗ್ರಾಹಕ ಆಯೋಗವು, ಮಹಾರಾಷ್ಟ್ರದ ಆಚಾರ್ಯ ವಿನೋಬಾ ಭಾವೆ ಆಸ್ಪತ್ರೆಗೆ ದಂಡ ವಿಧಿಸಿದೆ. ಚಿಕಿತ್ಸೆಗಾದ ವೆಚ್ಚ 1.5 ಲಕ್ಷ ರೂ. ಅನ್ನೂ ಪಾವತಿಸುವಂತೆ ಸೂಚಿಸಿದೆ. 2004ರಲ್ಲಿ ಮೂತ್ರ ಸೋಂಕು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಮೀಕ್ಷಾರನ್ನು ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗದ್ದರಿಂದ ಮತ್ತೂಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಆದರೆ ಪರಿಸ್ಥಿತಿ ಹದಗೆಟ್ಟಿದ್ದರಿಂದಾಗಿ ಮತ್ತೂಂದು ಆಸ್ಪತ್ರೆಗೆ ದಾಖಲಿಸಿದಾಗ ಅವರು ಕಿಡ್ನಿಯನ್ನೇ ತೆಗೆಯಬೇಕು ಎಂದಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆ ನಡೆಸಿದಾಗ ಮಗುವಿನ ಮೂತ್ರಕೋಶದಲ್ಲಿ ವಿನೋಬಾ ಬಾವೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದಾಗ ಹತ್ತಿಯನ್ನು ಮೂತ್ರಕೋಶದಲ್ಲೇ ಬಿಟ್ಟಿದ್ದರಿಂದ ಈ ಎಲ್ಲ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಇದರಿಂದಾಗಿ ಕಿಡ್ನಿಯನ್ನು ತೆಗೆಯಬೇಕಾಯಿತು ಎಂದು ವರದಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!