ಷೇರಿಗೆ ವಾರಾಂತ್ಯ ಆಘಾತ
Team Udayavani, Jan 23, 2021, 6:20 AM IST
ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಸಂವೇದಿ ಸೂಚ್ಯಂಕ ವಾರಾಂತ್ಯ ದಿನವಾಗಿರುವ ಶುಕ್ರವಾರ 746 ಪಾಯಿಂಟ್ಸ್ಗಳಷ್ಟು ಪತನಗೊಂಡಿದೆ. ಹೀಗಾಗಿ ಐವತ್ತು ಸಾವಿರಕ್ಕೆ ಏರಿ ಮರೆ ಯಾಗಿದ್ದ ಸೂಚ್ಯಂಕ ಸಂತೋಷ ಮತ್ತೆ ಕಾಣಲಿಲ್ಲ. ದಿನಾಂತ್ಯಕ್ಕೆ ಸೂಚ್ಯಂಕ 48,878.54ರಲ್ಲಿ ಮುಕ್ತಾಯವಾಗಿದೆ. ಹೀಗಾಗಿ ಒಂದು ತಿಂಗಳ ಗರಿಷ್ಠ ಕುಸಿತವನ್ನೂ ಸೂಚ್ಯಂಕ ಕಂಡಂತಾಗಿದೆ. 2020ರ ಡಿ.21ರಂದು ಶೇ.3ರಷ್ಟು ಸೂಚ್ಯಂಕ ಪತನವಾಗಿತ್ತು.
ಆ್ಯಕ್ಸಿಸ್ ಬ್ಯಾಂಕ್ಗೆ ಹೆಚ್ಚು ನಷ್ಟ ಹೊಂದಿ ದ್ದರೆ, ಏಷ್ಯನ್ ಪೇಂಟ್ಸ್, ಎಸ್ಬಿಐ, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ನಷ್ಟ ಹೊಂದಿದ ಇತರ ಪ್ರಮುಖ ಕಂಪೆನಿಗಳು. ಬಜಾಜ್ ಅಟೋ, ಹಿಂದುಸ್ತಾನ್ ಯುನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಟಿಸಿಎಸ್ ಷೇರುಗಳು ಲಾಭ ಪಡೆದುಕೊಂಡವು. ನಿಫ್ಟಿ ಸೂಚ್ಯಂಕ 218.45 ಪಾಯಿಂಟ್ಸ್ ಕುಸಿದು, 14, 371.90ರಲ್ಲಿ ಮುಕ್ತಾಯವಾಯಿತು.
ರೂಪಾಯಿ ದೃಢ: ಅಮೆರಿಕದ ಡಾಲರ್ ಎದುರು ರೂಪಾಯಿ 2 ಪೈಸೆಯಷ್ಟು ಅಲ್ಪ ಲಾಭ ಪಡೆದುಕೊಂಡಿದೆ. ಅದಕ್ಕೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕೊಂಚ ಇಳಿಕೆಯಾದದ್ದೂ ಕಾರಣವಾಗಿದೆ. ದಿನದ ಅಂತ್ಯಕ್ಕೆ ಡಾಲರ್ ಎದುರು 72.97 ರೂ.ನಲ್ಲಿ ಮುಕ್ತಾಯವಾಯಿತು.
ಕುಸಿತಕ್ಕೆ ಕಾರಣಗಳು ;
ಯು.ಕೆ., ಐರೋಪ್ಯ ಒಕ್ಕೂಟದಲ್ಲಿನ ಕೊರೊನಾಕ್ಕೆ ಸಂಬಂಧಿಸಿ ಹೊಸ ನಿಬಂಧನೆ ಹೇರಿಕೆ. ಹೀಗಾಗಿ ಅಲ್ಲಿನ ವಹಿವಾಟುಗಳ ಮೇಲೆ ಪ್ರತಿಕೂಲ ಛಾಯೆ.ಕೇಂದ್ರ ಬಜೆಟ್ನಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳು, ಅಮೆರಿಕ ಸರಕಾರದ ಮುಂದಿನ ಘೋಷಣೆಗಳು. ಒಂದು ವೇಳೆ ಅಮೆರಿಕದಲ್ಲಿ ಕಠಿನ ನಿಲುವು ಪ್ರದರ್ಶನಗೊಂಡರೆ ಎಂಬ ಅಳುಕು ಷೇರು ಪೇಟೆ ಮೇಲೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು