ನನ್ನ ಪಾತ್ರ ಈಗ ಕೇವಲ ಕಲಿಯುವುದು, ಸಹಕರಿಸುವುದು: ಪ್ರಶಾಂತ್ ಕಿಶೋರ್ ಖೇದ
Team Udayavani, Mar 29, 2019, 3:57 PM IST
ಪಟ್ನಾ : ಬಿಹಾರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಣತಂತ್ರಗಾರಿಕೆಯ ಜವಾಬ್ದಾರಿಯನ್ನು ತನಗೆ ಕೊಡದಿರುವುದಕ್ಕೆ ನಿರಾಶರಾಗಿರುವ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, “ಇದು ನನ್ನ ರಾಜಕೀಯ ವೃತ್ತಿ ಬದುಕಿನ ಆರಂಭವಷ್ಟೇ; ಆದುದರಿಂದ ಈಗ ನನ್ನ ಪಾತ್ರ ಕಲಿಯುವುದು ಮತ್ತು ಸಹಕರಿಸುವುದಷ್ಟೇ ಆಗಿದೆ’ ಎಂದು ಇಂದು ಶುಕ್ರವಾರ ಖೇದದಿಂದ ಹೇಳಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವೀ ರಣತಂತ್ರ ಹೆಣೆದು ಪ್ರಸಿದ್ದಿಗೆ ಬಂದಿದ್ದ ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿದ್ದರು.
”ಮೋದಿ ಮತ್ತು ನಿತೀಶ್ ನಾಯಕತ್ವದಡಿ ಬಿಹಾರದಲ್ಲಿ ಎನ್ಡಿಎ ಬಲವಾದು ಹೋರಾಟ ಮಾಡುತ್ತಿದೆ. ಇದರ ಹೊಣೆಗಾರಿಕೆಯನ್ನು ಆರ್ ಸಿ ಪಿ ಸಿಂಗ್ ವಹಿಸಿಕೊಂಡಿದ್ದಾರೆ. ನಾನೀಗ ನನ್ನ ರಾಜಕೀಯ ವೃತ್ತಿ ಬದುಕಿನ ಆರಂಭಿಕ ಹಂತದಲ್ಲಿದ್ದೇನೆ; ಆದುದರಿಂದ ಈಗ ನನ್ನ ಪಾತ್ರ ಕಲಿಯುವುದು ಮತ್ತು ಸಹಕರಿಸುವುದಷ್ಟೇ ಆಗಿದೆ” ಎಂದು ಪ್ರಶಾಂತ್ ಕಿಶೋರ್ ಇಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು