- Monday 16 Dec 2019
ಮೋದಿ ನಾಮಪತ್ರಕ್ಕೆ ‘ರಿಯಲ್ ಚೌಕಿದಾರ್’ ಅನುಮೋದನೆ !
ಮಣಿಕರ್ಣಿಕಾ ಘಾಟ್ ನ ಈ ಕಾವಲುಗಾರ ಪ್ರಧಾನಿ ನಾಮಪತ್ರದ ಸೂಚಕರಲ್ಲೊಬ್ಬ!
Team Udayavani, Apr 26, 2019, 1:19 PM IST
ವಾರಣಾಸಿ: ‘ನಾನು ಪ್ರಧಾನಮಂತ್ರಿಯಲ್ಲ ನಿಮ್ಮ ಪ್ರಧಾನ ಸೇವಕ’ ಮತ್ತು ‘ನಾನು ಈ ದೇಶದ ಚೌಕಿದಾರ’ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ನಾಮಪತ್ರ ಸಲ್ಲಿಕೆ ವೇಳೆ ನಿಜವಾದ ಚೌಕಿದಾರರೊಬ್ಬರನ್ನು ತಮ್ಮ ನಾಮಪತ್ರಕ್ಕೆ ಸೂಚಕರನ್ನಾಗಿ ಆಯ್ಕೆಮಾಡಿಕೊಂಡಿದ್ದು ವಿಶೇಷವಾಗಿತ್ತು.
ವಾರಣಾಸಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಶುಕ್ರವಾರದಂದು ಇಲ್ಲಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಸೂಚಕರಲ್ಲಿ ಒಬ್ಬರಾಗಿರುವ ಪ್ರೊಫೆಸರ್ ಅನ್ನಪೂರ್ಣ ಅವರ ಕಾಲಿಗೆ ಎರಗಿ ಬಳಿಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಅನ್ನಪೂರ್ಣ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಥಾಪಕ ಸಮಾಜ ಸುಧಾರಕ ಮದನ ಮೋಹನ ಮಾಳವೀಯ ಅವರ ಮೊಮ್ಮಗಳಾಗಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿರುವವರಲ್ಲಿ ಒಬ್ಬ ರಿಯಲ್ ಚೌಕಿದಾರ ಸಹ ಸೇರಿದ್ದಾರೆ ಎನ್ನುವುದೇ ವಿಶೇಷ. ಇಲ್ಲಿನ ಮಣಿಕರ್ಣಿಕಾ ಘಾಟ್ ನಲ್ಲಿ ಕಾವಲುಗಾರರಾಗಿರುವ ಜಗದೀಶ್ ಚೌಧರಿ ಎಂಬವರೇ ಈ ರಿಯಲ್ ಚೌಕಿದಾರರಾಗಿದ್ದು, ಮೋದಿ ಅವರ ನಾಮಪತ್ರದ ಸೂಚಕರಲ್ಲಿ ಜಗದೀಶ್ ಅವರೂ ಕೂಡ ಒಬ್ಬರಾಗಿದ್ದಾರೆ.
ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿರುವ ಇನ್ನಿಬ್ಬರಲ್ಲಿ ರಮಾಶಂಕರ್ ಪಟೇಲ್ ಎನ್ನುವವರು ಕೃಷಿ ವಿಜ್ಞಾನಿಯಾಗಿದ್ದರೆ ಸುಭಾಷ್ ಚಂದ್ರ ಗುಪ್ತಾ ಎಂಬವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದಾರೆ.
ಗುರುವಾರ ವಾರಣಾಸಿಯುದ್ದಕ್ಕೂ ಭರ್ಜರಿ ರೋಡ್ ಶೋ ನಡೆಸಿ ಬಳಿಕ ಗಂಗಾರತಿಯಲ್ಲಿ ಭಾಗವಹಿಸಿ ಗಮನಸೆಳೆದಿದ್ದ ಮೋದಿ ಇಂದು ತಮ್ಮ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿಯೂ ವಿಶೇಷತೆಯನ್ನು ಮೆರೆಯುವ ಮೂಲಕ ಗಮನಸೆಳೆದಿದ್ದಾರೆ.
Before filing my nomination papers, prayed at the temple of Bhagwan Kaal Bhairav, also revered as the Kotwal of Kashi. pic.twitter.com/AuEy9GjHQO
— Chowkidar Narendra Modi (@narendramodi) April 26, 2019
ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ‘ಕಾಶಿಯ ಕೊತ್ವಾಲ’ ಎಂದೇ ಹೆಸರುವಾಸಿಯಾಗಿರುವ ವಾರಣಾಸಿಯಲ್ಲಿರುವ ಪುರಾಣ ಪ್ರಸಿದ್ಧ ಕಾಲಭೈರವೇಶ್ವರನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜಾಗತಿಕ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ), ಇದೀಗ ಮತ್ತೂಂದು...
-
ಗೌಹಾತಿ: ಪೌರತ್ವ ಹಕ್ಕು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜಧಾನಿ ಗೌಹಾತಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಪ್ರತಿಭಟನೆಯ ಬಿಸಿ ನಿಧಾನವಾಗಿ...
-
ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ಆಕಾಶದೆತ್ತರದಷ್ಟು ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸೋಮವಾರ ಕೋಲ್ಕತಾದಲ್ಲಿ ಬೃಹತ್ ರಾಲಿ ನಡೆಸಿದ್ದು,...
-
ಕೋಲ್ಕತ್ತಾ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ಹಲವೆಡೆ ಭಾರಿ ಪ್ರತಿಭಟನೆಗಳಾಗುತ್ತಿದ್ದು, ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಮಮತಾ...
ಹೊಸ ಸೇರ್ಪಡೆ
-
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ದೆಹಲಿಯಲ್ಲಿ ಜಾಮಿಮಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾನುವಾರ ಸಂಜೆ ಜಾಮೀಯಾ ಮಿಲ್ಲಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳ ಹಿಂಸಾಚಾರದ ಟ್ವೀಟ್ ಗೆ ಬಾಲಿವುಡ್ ಸ್ಟಾರ್...
-
ನವದೆಹಲಿ: ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜಾಗತಿಕ ಗಮನ ಸೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ), ಇದೀಗ ಮತ್ತೂಂದು...
-
ಗೌಹಾತಿ: ಪೌರತ್ವ ಹಕ್ಕು ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಅಸ್ಸಾಂ ರಾಜಧಾನಿ ಗೌಹಾತಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಪ್ರತಿಭಟನೆಯ ಬಿಸಿ ನಿಧಾನವಾಗಿ...
-
ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇನ್ನು ನಾಲ್ಕು ತಿಂಗಳೊಳಗೆ ಆಕಾಶದೆತ್ತರದಷ್ಟು ರಾಮ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್...