ಅಣೆಕಟ್ಟು ಸುರಕ್ಷತೆಗೆ ಪ್ರಾಧಿಕಾರ
Team Udayavani, Jun 16, 2018, 8:30 AM IST
ದೇಶದಲ್ಲಿರುವ ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರಕಾರ ಅಣೆಕಟ್ಟುಗಳ ಸುರಕ್ಷಾ ವಿಧೇಯಕ 2018ಕ್ಕೆ ಅನುಮೋದನೆ ನೀಡಿದೆ. 1979ರಲ್ಲಿ ಗುಜರಾತ್ ನಲ್ಲಿ ನಿರ್ಮಾಣಗೊಂಡಿದ್ದ ಮಚು ಅಣೆಕಟ್ಟು ಪ್ರವಾಹದಿಂದಾಗಿ ಒಡೆದು 2 ಸಾವಿರ ಮಂದಿ ಅಸುನೀಗಿ, 12,700 ಮನೆಗಳು ನಾಶಗೊಂಡ ಬಳಿಕ ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸಮಗ್ರ ಕಾಯ್ದೆಬೇಕೆಂದು ಮನಗಾಣಲಾಗಿತ್ತು. ಸದ್ಯ ಅದಕ್ಕೆ ಸಂಬಂಧಿಸಿದ ವಿಧೇಯಕಕ್ಕೆ ಅನುಮೋದನೆ ಸಿಕ್ಕಿದ್ದು, ಜುಲೈಯಲ್ಲಿ ನಡೆಯಲಿರುವ ಸಂಸತ್ ನ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ.
ವಿಧೇಯಕದ ಪ್ರಮುಖ ಅಂಶಗಳೇನು?
– ಅಣೆಕಟ್ಟುಗಳ ನಿರ್ವಹಣೆಗಾಗಿ ಸಲಹೆ ಸೂಚನೆ ನೀಡಲು ರಾಷ್ಟ್ರೀಯ ಸಮಿತಿ ರಚನೆ
– ಸುರಕ್ಷತೆ, ನಿಯಮಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಪ್ರಾಧಿಕಾರ ಸ್ಥಾಪನೆ
– ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿರುವ ಅಣೆಕಟ್ಟುಗಳ ನಿರ್ವಹಣೆಗೆ ಸಮಿತಿ ರಚನೆ
– ಈ ರೀತಿಯ ಕ್ರಮದಿಂದ ದೇಶದ ಜನರ ಜೀವ ರಕ್ಷಣೆ, ಆಸ್ತಿ, ಪ್ರಾಣಿಗಳ ರಕ್ಷಣೆಗೆ ಸೂಕ್ತ ಪ್ರಾಧಿಕಾರ ಸ್ಥಾಪನೆ.
– ಸಮಿತಿ, ಪ್ರಾಧಿಕಾರದ ಕೆಲಸ- ಕರ್ತವ್ಯ
– ಅಣೆಕಟ್ಟುಗಳ ಕಡ್ಡಾಯ ಪರಿಶೀಲನೆ, ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ನಿರ್ವಹಣೆ
– ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲನೆ
ರಾಜ್ಯವಾರು ಸಂಖ್ಯೆ
ಮಹಾರಾಷ್ಟ್ರ: 2, 354
ಮಧ್ಯಪ್ರದೇಶ: 906
ಗುಜರಾತ್: 632
ಛತ್ತೀಸ್ಗಡ: 258
ಕರ್ನಾಟಕ: 231
ದೇಶದಲ್ಲಿರುವ ದೊಡ್ಡ ಅಣೆಕಟ್ಟುಗಳು: 5,701
ಸದ್ಯ ಉಪಯೋಗದಲ್ಲಿ ಇರುವವುಗಳ ಸಂಖ್ಯೆ: 5, 254
ನಿರ್ಮಾಣ ಹಂತದಲ್ಲಿರುವವು: 447
ದೇಶದಲ್ಲಿ ಸಂಭವಿಸಿದ ದುರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ