ಕಂಬದಲ್ಲಿ ಐಸಿಸ್ ಸಂದೇಶ: ಮುಂಬೈ ಹೈಅಲರ್ಟ್
Team Udayavani, Jun 5, 2019, 6:00 AM IST
ಮುಂಬೈ: ನವಿ ಮುಂಬೈನ ಉರಾನ್ ಪ್ರದೇಶದ ಸೇತುವೆಯೊಂದರ ಕಂಬದಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಸಂಘಟನೆಯನ್ನು ಹೊಗಳಿರುವಂಥ ಸಂದೇಶಗಳನ್ನು ಬರೆದಿರುವುದು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ವಿಶೇಷವೆಂದರೆ, ಈ ಸಂದೇಶಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿ ವಾಲ್ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಹೆಸರುಗಳೂ ಕಂಡು ಬಂದಿದೆ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ತಿಳಿಸಿ ದ್ದಾರೆ. ರಾಯ್ಗಡ ಜಿಲ್ಲೆಯ ಉರಾನ್ ನಲ್ಲಿರುವ ಖೋಪ್ಟೆ ಸೇತುವೆಯ ಕಂಬದಲ್ಲಿ “ಐಸಿಸ್ಗಾಗಿ ಹೋರಾಡುತ್ತಿರುವ ಸೈನಿಕ ರಿಗೆ ನಮನ’ ಎಂದು ಬರೆಯಲಾಗಿದೆ. ಜತೆಗೆ, ಐಸಿಸ್ ಉಗ್ರರಾದ ಅಬೂಬಕ್ಕರ್ ಅಲ್ ಬಾಗ್ಧಾದಿ ಹಾಗೂ ಇತರರ ಹೆಸರು ಗಳನ್ನೂ ಉಲ್ಲೇಖಿಸಲಾಗಿದೆ. ಒಂದು ಸಂದೇಶದಲ್ಲಿ ಉಗ್ರ ಹಫೀಜ್ ಸಯೀದ್ನ ಹೆಸರೂ ಇದೆ. ಮತ್ತೂಂದರಲ್ಲಿ ರಾಕೆಟ್ನ ಚಿತ್ರಗಳನ್ನು ಬಿಡಿಸಲಾಗಿದೆ.
ಈ ಸೇತುವೆಯ ಸಮೀಪವೇ ಒಎನ್ಜಿಸಿ, ಶಸ್ತ್ರಾಸ್ತ್ರ ಕಾರ್ಖಾನೆ, ವಿದ್ಯುತ್ ಕಾರ್ಖಾನೆ, ಜೆಎನ್ಪಿಟಿ ಮತ್ತಿತರ ಪ್ರಮುಖ ಕಟ್ಟಡಗಳಿದ್ದು, ಇವುಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವ ಕಾರಣ, ಈ ಸಂದೇಶಗಳನ್ನು ನಿರ್ಲಕ್ಷಿಸು ವಂತಿಲ್ಲ. ತನಿಖೆ ಚುರುಕುಗೊಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ