ಮತ್ತೆ ಕ್ಷಮಾದಾನ ಕೋರಿ ಲೆಫ್ಟಿನಂಟ್ ಗವರ್ನರ್ ಗೆ ಅರ್ಜಿ ಸಲ್ಲಿಸಿದ ವಿನಯ್ ಶರ್ಮಾ
Team Udayavani, Mar 10, 2020, 11:21 AM IST
ಹೊಸದಿಲ್ಲಿ: ನೇಣಿಗೇರಿಸಲು 10 ದಿನಗಳು ಬಾಕಿ ಇರುವಂತೆ ನಿರ್ಭಯಾ ಪ್ರಕರಣ ಅಪರಾಧಿ ವಿನಯ್ ಶರ್ಮ ಕ್ಷಮಾದಾನ ಕೋರಿ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ಗೆ ಅರ್ಜಿ ಸಲ್ಲಿಸಿದ್ದಾನೆ.
ಮರಣದಂಡನೆಗೆ ಗುರಿಯಾಗಿರುವ ಶರ್ಮಾ ಸೇರಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಮಾ.20ಕ್ಕೆ ಸಮಯ ನಿಗದಿಮಾಡಲಾಗಿದೆ. ಇದು ನಾಲ್ಕನೇ ಬಾರಿಗೆ ಮಾಡುತ್ತಿರುವ ಸಮಯ ನಿಗದಿ ಆಗಿದೆ. ತಪ್ಪಿತಸ್ಥರು ಕ್ಷಮಾಧಾನ ಕೋರಿ ಹೈಕೋರ್ಟ್, ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು.