ಕೇವಲ 5ದಿನದಲ್ಲಿ ಪಿಎಂ ಕೇರ್ ಫಂಡ್ ಗೆ 3,076 ಕೋಟಿ ದೇಣಿಗೆ; ಹೆಸರು ಬಹಿರಂಗಪಡಿಸಿ ಎಂದ ಚಿದು
ಮಾರ್ಚ್ ನಂತರ ಪಡೆದ ದೇಣಿಗೆಯ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ತಿಳಿಸಿದೆ.
Team Udayavani, Sep 2, 2020, 2:38 PM IST
ನವದೆಹಲಿ: ಪಿಎಂ ಕೇರ್ ಫಂಡ್ ಗೆ ಕೇವಲ 5 ದಿನಗಳಲ್ಲಿ 3,076 ಕೋಟಿ ರೂಪಾಯಿ ದೇಣಿಗೆ ದೇಶ-ವಿದೇಶಗಳಿಂದ ಬಂದಿರುವುದಾಗಿ ಸರ್ಕಾರ ಬಿಡುಗಡೆಗೊಳಿಸಿರುವ ಆಡಿಟ್ ಪ್ರಕಟಣೆಯಲ್ಲಿ ತಿಳಿಸಿದೆ. 2020ರ ಆರ್ಥಿಕ ಸಾಲಿನ ಪ್ರಕಟಣೆ ಬಿಡುಗಡೆ ಮಾಡಿತ್ತು. ಆದರೆ ಮಾರ್ಚ್ 27ರಿಂದ 31ರವರೆಗಿನ ದೇಣಿಗೆಯ ದಾಖಲೆಯನ್ನು ಮಾತ್ರ ಬಹಿರಂಗಗೊಳಿಸಿರುವುದಾಗಿ ವರದಿ ತಿಳಿಸಿದೆ.
3076 ಕೋಟಿ ರೂಪಾಯಿ ಹಣದಲ್ಲಿ, 3,075.85 ಕೋಟಿ ರೂಪಾಯಿ ದೇಶೀಯವಾಗಿ ಸಂಗ್ರಹವಾದ ದೇಣಿಗೆಯಾಗಿದೆ ಮತ್ತು 39.67 ಕೋಟಿ ರೂಪಾಯಿ ವಿದೇಶಿ ದೇಣಿಯಾಗಿದೆ.
ಪಿಎಂ ಕೇರ್ ನಲ್ಲಿ ಪ್ರಾಥಮಿಕವಾಗಿ ಇದ್ದ ಮೂಲಧನ 2,25 ಲಕ್ಷ ರೂಪಾಯಿ, ಅಲ್ಲದೇ ದೇಣಿಯ ಮೂಲಕ ಸುಮಾರು 35 ಲಕ್ಷ ರೂಪಾಯಿ ಬಡ್ಡಿ ಪಡೆಯಲಾಗಿದೆ ಎಂದು ವಿವರಿಸಿದೆ.
ಪಿಎಂ ಕೇರ್ ಫಂಡ್ ವೆಬ್ ಸೈಟ್ ನಲ್ಲಿ ಆಡಿಟ್ ವರದಿಯನ್ನು ಪ್ರಕಟಿಸಲಾಗಿದೆ. ಮಾರ್ಚ್ 31ರವರೆಗೆ ಸಂಗ್ರಹಿಸಲಾದ 5 ದಿನಗಳ ದೇಣಿಗೆ ವಿವರವನ್ನು ಪ್ರಕಟಿಸಿದೆ. ಆದರೆ ಮಾರ್ಚ್ ನಂತರ ಪಡೆದ ದೇಣಿಗೆಯ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ತಿಳಿಸಿದೆ.
The auditors of PM CARES FUND have confirmed that the Fund received Rs 3076 crore in just 5 days between March 26 and 31, 2020.
— P. Chidambaram (@PChidambaram_IN) September 2, 2020
ದೇಶೀಯ ಮತ್ತು ವಿದೇಶಿ ದೇಣಿಗೆದಾರರು ಅಥವಾ ಕೊಡುಗೆದಾರರ ಯಾವ ವಿವರವನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿಲ್ಲ. ಇಷ್ಟೊಂದು ದೊಡ್ಡ ಮೊತ್ತ ನೀಡಿರುವ ದೇಣಿಗೆದಾರರ ಹೆಸರನ್ನು ಯಾಕೆ ಬಹಿರಂಗಗೊಳಿಸಿಲ್ಲ ಎಂದು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಟ್ವೋಟ್ ಮೂಲಕ ಪ್ರಶ್ನಿಸಿದ್ದಾರೆ.
ಪ್ರತಿಯೊಂದು ಟ್ರಸ್ಟ್ ಅಥವಾ ಎನ್ ಜಿಒಗಳು ತಾವು ಪಡೆದಿರುವ ದೇಣಿಗೆದಾರರ ಹೆಸರನ್ನು ಬಹಿರಂಗಪಡಿಸಬೇಕು ಎಂಬ ನಿಯಮವಿದೆ. ಹೀಗಾಗಿ ಪಿಎಂ ಕೇರ್ ಫಂಡ್ ಗೆ ಯಾಕೆ ಈ ವಿನಾಯ್ತಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ