ಪ್ರಿಯಾಂಕಾ ರಾಜಕೀಯ ಪಯಣ ಆರಂಭ; ಪತಿ ವಾದ್ರಾ ಭಾವಪರವಶ
Team Udayavani, Feb 11, 2019, 12:20 PM IST
ಹೊಸದಿಲ್ಲಿ : ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪಯಣ ಇಂದು ಭರ್ಜರಿ ರೋಡ್ ಶೋ ಮೂಲಕ ಆರಂಭವಾಗಿರುವ ಸಂದರ್ಭದಲ್ಲಿ ಆಕೆಯ ಪತಿ ರಾಬರ್ಟ್ ವಾದ್ರಾ ಭಾವಪರವಶರಾಗಿದ್ದು ದೇಶದ ಜನರಲ್ಲಿ ತಮ್ಮ ಕೋರಿಕೆ ಮಂಡಿಸಿದ್ದಾರೆ : ‘ಪ್ರಿಯಾಂಕಾಳನ್ನು ನಿಮ್ಮ ಕೈಗೊಪ್ಪಿಸುತ್ತಿದ್ದೇನೆ. ಆಕೆಯ ಸುರಕ್ಷೆಯನ್ನು ದಯವಿಟ್ಟು ನೋಡಿಕೊಳ್ಳಿ’. ಹೀಗೆಂದು ವಾದ್ರಾ ಟ್ವೀಟ್ ಮಾಡಿದ್ದಾರೆ.
ಅಂದ ಹಾಗೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಲಕ್ನೋದಲ್ಲಿ ತಮ್ಮ ರಾಜಕೀಯ ಯಾತ್ರೆಯ ಮೊದಲ ಚರಣದಲ್ಲಿ ಭಾರೀ ರೋಡ್ ಶೋ ನಡೆಸಿ ತಮಗಿರುವ ಅಪಾರ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ.
”ರಾಜಕೀಯ ರಂಗ ಅತ್ಯಂತ ಕೆಟ್ಟು ಹೋಗಿರುವ ಇಂದಿನ ದಿನಗಳಲ್ಲಿ ಪ್ರಿಯಾಂಕಾಳ ಸುರಕ್ಷೆಯನ್ನು ನೋಡಿಕೊಳ್ಳುವಂತೆ ನಿಮ್ಮಲ್ಲಿ (ದೇಶದ ಜನರಲ್ಲಿ) ನಾನು ವಿನಂತಿಸುತ್ತಿದ್ದೇನೆ” ಎಂದು ವಾದ್ರಾ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪತ್ನಿ ಪ್ರಿಯಾಂಕಾಳನ್ನು ವಾದ್ರಾ Perfect Wife ಎಂದು ಅಪಾರ ಪ್ರೀತಿ, ಮೆಚ್ಚುಗೆಯಿಂದ ಕರೆದಿದ್ದಾರೆ !
ಪ್ರಿಯಾಂಕಾ ಗಾಂಧಿಯನ್ನು ಈಚೆಗಷ್ಟೇ ಪೂರ್ವ ಉತ್ತರ ಪ್ರದೇಶದ ಪ್ರಭಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದ್ದು ಆ ಸಂದರ್ಭದಲ್ಲಿ ವಾದ್ರಾ ಫೇಸ್ ಬುಕ್ನಲ್ಲಿ ಹೀಗೆ ಬರೆದುಕೊಂಡಿದ್ದರು : ಅಭಿನಂದನೆಗಳು ಪ್ರಿಯಾಂಕಾ; ನಿನ್ನ ಬದುಕಿನ ಪ್ರತಿಯೊಂದು ಹಂತದಲ್ಲಿ ನಾನು ನಿನ್ನ ಜತೆಗಿದ್ದೇನೆ. ನಿನ್ನಿಂದ ಸಾಧ್ಯವಿರುವ ಉತ್ಕೃಷ್ಟತೆಯನ್ನೇ ಕೊಡು !
1997ರಲ್ಲಿ ರಾಬರ್ಟ್ ವಾದ್ರಾ – ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಕೃತ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ನಿಂದ ಹಣಕಾಸು ಅಕ್ರಮ ಪ್ರಕರಣಗಳ ತನಿಖೆ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕಾ, ಪತಿ ವಾದ್ರಾರನ್ನು ಇ.ಡಿ ಕಾರ್ಯಾಲಯಕ್ಕೆ ತನ್ನ ಕಾರಿನಲ್ಲಿ ಡ್ರಾಪ್ ನೀಡಿ ಸುದ್ದಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ