ಮತ್ತೆ ಎದ್ದು ಕೂತ ರಫೇಲ್ ಗುಮ್ಮ
ರಫೇಲ್ ಡೀಲ್ ಬಳಿಕ ರಿಲಯನ್ಸ್ನ 1,121 ಕೋಟಿ ರೂ. ತೆರಿಗೆ ಮನ್ನಾ?
Team Udayavani, Apr 14, 2019, 6:00 AM IST
ಹೊಸದಿಲ್ಲಿ: ಬೂದಿಮುಚ್ಚಿದ ಕೆಂಡದಂತಿರುವ ರಫೇಲ್ ಕೂಪದಲ್ಲಿ ಮತ್ತೆ ಬೆಂಕಿ ಭುಗಿಲೆದ್ದಿದೆ. ಫ್ರಾನ್ಸ್ನ ಹೆಸರಾಂತ ದೈನಿಕ “ಲೆ ಮೊಂಡೆ’, ಭಾರತ ಸರಕಾರವು ನವೀಕರಣಗೊಂಡ ರಫೇಲ್ ಒಪ್ಪಂದವನ್ನು ಪ್ರಕಟಿಸುತ್ತಿದ್ದಂತೆ, ಅತ್ತ, ಫ್ರಾನ್ಸ್ ನಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆಯ ಮೇಲೆ ಅಲ್ಲಿನ ಸರಕಾರ ವಿಧಿಸಿದ್ದ 143.7 ಮಿಲಿಯನ್ ಪೌಂಡುಗಳಷ್ಟು (ಅಂದಾಜು 1,121 ಕೋಟಿ ರೂ.) ತೆರಿಗೆಯನ್ನು ಮನ್ನಾ ಮಾಡಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ಹೊರಹಾಕಿದೆ. ಇದು ಈ ವಿಚಾರದಲ್ಲಿ ಮತ್ತೂಂದು ಸುತ್ತಿನ ಪರ- ವಿರೋಧ ಚರ್ಚೆಗೆ ನಾಂದಿ ಹಾಡಿದೆ.
ರಿಲಯನ್ಸ್ ನಿರಾಕರಣೆ: ಪತ್ರಿಕೆಯ ವರದಿಯನ್ನು ನಿರಾಕರಿಸಿರುವ ರಿಲಯನ್ಸ್, “ಫ್ರಾನ್ಸ್ನಲ್ಲಿ ತನ್ನ ಮೇಲಿದ್ದ ತೆರಿಗೆಯನ್ನು ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲೇ ಕಟ್ಟಲಾಗಿದೆ. ಇದರಲ್ಲಿ ಯಾವುದೇ ಕೃತ್ರಿಮತೆ ಅಡಗಿಲ್ಲ’ ಎಂದಿದೆ. ಇನ್ನೊಂದೆಡೆ, ಹೊಸದಿಲ್ಲಿಯಲ್ಲಿರುವ ಫ್ರಾನ್ಸ್ನ ರಾಯಭಾರ ಕಚೇರಿಯಿಂದಲೂ ಸ್ಪಷ್ಟನೆ ಹೊರಬಿದ್ದಿದೆ. ಫ್ರಾನ್ಸ್ನಲ್ಲಿರುವ ರಿಲಯನ್ಸ್ ಕಮ್ಯೂನಿ ಕೇಶನ್ ಕಂಪೆನಿಯ ಮೇಲಿದ್ದ ತೆರಿಗೆ ಮನ್ನಾ ನಿರ್ಧಾರವನ್ನು ಫ್ರಾನ್ಸ್ನ ಸರಕಾರ ಮತ್ತು ಅಲ್ಲಿನ ಕಾನೂನಿಗೆ ಅನುಗುಣವಾಗಿಯೇ ಕೈಗೊಳ್ಳಲಾಗಿದೆ. ಇದ ರಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪವಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಪ್ರತಿಕ್ರಿಯೆ: ಹೊಸ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, “ಮೋದಿಯವರ ಕೃಪಾಕಟಾಕ್ಷದಿಂದಲೇ ರಿಲಯನ್ಸ್ ಕಂಪೆನಿಯ ಮೇಲಿನ ತೆರಿಗೆ ಮನ್ನಾ ಆಗಿರುವುದು ಇದರಿಂದ ಸ್ಪುಟ ವಾಗಿದೆ’ ಎಂದಿದೆ. “”ರಫೇಲ್ ಹೆಸರಿ ನಲ್ಲಿ ಅಂಬಾನಿ ಹಾಗೂ ಫ್ರಾನ್ಸ್ ನಡುವೆ ಮೋದಿಯವರು “ದಲ್ಲಾಳಿ’ಯಂತೆ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಹೊಸದಾಗಿ ಸೃಷ್ಟಿಯಾದ ರಿಲಯನ್ಸ್ ಡಿಫೆನ್ಸ್ ಕಂಪೆನಿಗೆ ರಫೇಲ್ ಒಪ್ಪಂದ ನೀಡುವ ಮೂಲಕ ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ಮೋದಿ ಲಾಭ ಮಾಡಿಕೊಟ್ಟಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲ ಹೇಳಿದ್ದಾರೆ.
ಹಿಂದಿನ ರಫೇಲ್ ಒಪ್ಪಂದ ನವೀಕರಣಗೊಳಿಸುವ ಮೂಲಕ ಮೋದಿಯವರು ಜನರ ತೆರಿಗೆ ದುಡ್ಡನ್ನು ವ್ಯರ್ಥ ಗೊಳಿಸಿ ದ್ದಾರೆ. ಅಲ್ಲದೆ, ಅನಿಲ್ ಅಂಬಾನಿ ಯಂಥ ಬಂಡವಾಳ ಶಾಹಿಗಳ ತೆರಿಗೆ ಮನ್ನಾಕ್ಕೂ ಸಹಕರಿಸಿದ್ದಾರೆ.
ಸೀತಾರಾಂ ಯೆಚೂರಿ, ಸಿಪಿಎಂ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ