ಶ್ರೀನಗರದಲ್ಲಿ ಲ್ಯಾಂಡ್ ಆದ ಒಂದೇ ಗಂಟೆಯಲ್ಲಿ ರಾಹುಲ್ ಮತ್ತು ತಂಡ ವಾಪಸ್!
Team Udayavani, Aug 24, 2019, 4:14 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕದ ಪರಿಸ್ಥಿತಿ ಅವಲೋಕನಕ್ಕಾಗಿ ಶ್ರೀನಗರಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರ ಯತ್ನ ವಿಫಲವಾಗಿದೆ.
ಪರಿಸ್ಥಿತಿ ಶಾಂತವಾಗುತ್ತಿರುವ ಈ ಹೊತ್ತಿನಲ್ಲಿ ಭೇಟಿ ನೀಡುವುದು ಬೇಡ ಎಂದು ಸ್ಥಳೀಯಾಡಳಿತ ಹೇಳಿದ್ದರೂ, ನಾಯಕರು ಶ್ರೀನಗರದಲ್ಲಿ ಪರಿಸ್ಥಿತಿ ಅವಲೋಕನಕ್ಕಾಗಿ ಬೆಳಗ್ಗೆ ದಿಲ್ಲಿಯಿಂದ ತೆರಳಿದ್ದರು.
ಈ ತಂಡದಲ್ಲಿ ಗುಲಾಂ ನಬಿ ಆಜಾದ್, ಡಿ ರಾಜಾ, ಶರದ್ ಯಾದವ್, ಮನೋಜ್ ಝಾ, ಮಜೀದ್ ಮೆಮೋನ್ ಮತ್ತಿತರರಿದ್ದರು. ವಿಮಾನದಿಂದ ಇಳಿದಿದ್ದರೂ, ವಿಮಾನ ನಿಲ್ದಾಣದಿಂದ ಹೊರಬರಲು ಅನುಮತಿ ಸಿಗಲಿಲ್ಲ. ಜತೆಗೆ ಬೇರೆ ವಿಮಾನದಲ್ಲಿ ಅವರನ್ನು ವಾಪಸ್ ಕಳಿಸಲಾಗಿದೆ.