ಮತಾಂತರಕ್ಕೆ ನಿಯಮಾವಳಿ
Team Udayavani, Dec 16, 2017, 6:45 AM IST
ಜೋಧ್ಪುರ: ಯಾವುದೇ ಧರ್ಮಕ್ಕೆ ಬದಲಾಗಲು ಬಯಸಿದವರು ತಮ್ಮ ಹೆಸರನ್ನು ನೋಟಿಸ್ ಬೋರ್ಡ್ನಲ್ಲಿ ಒಂದು ವಾರ ಪ್ರದರ್ಶಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಹೊಸ ನಿಯಮಾವಳಿಯನ್ನು ಹೊರಡಿಸಿದೆ.
ಲವ್ ಜೆಹಾದ್ ಪ್ರಕರಣದ ಅರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್ ಈ ನಿಯಮಾವಳಿ ಹೊರಡಿಸಿದೆ. ಅನುಮತಿ ನೀಡುವ ಮೊದಲು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆಯಾದರೂ, ಆಕ್ಷೇಪಣೆ ಸಲ್ಲಿಸಲು ಯಾರು ಅರ್ಹರು ಎಂಬುದನ್ನು ನಿಗದಿಪಡಿಸಿಲ್ಲ. ಈ ನೀತಿಗಳಿಗೆ ಬದ್ಧವಾಗದ ಯಾವುದೇ ವಿವಾಹ ಅಥವಾ ಮತಾಂತರವನ್ನು ಕೋರ್ಟ್ ರದ್ದುಗೊಳಿಸಬಹುದಾಗಿದೆ. ಬಲವಂತವಾಗಿ ಮತಾಂತರ ತಡೆಯಲು ಕೆಲವು ನಿಯಮಾವಳಿಗಳು ಅಗತ್ಯವಿರುತ್ತವೆ. ಯಾಕೆಂದರೆ ಧರ್ಮವು ನಂಬಿಕೆಯದ್ದಾಗಿದೆ. ಅದು ತಾರ್ಕಿಕವಾದದ್ದಲ್ಲ ಎಂದು ನ್ಯಾಯಮೂರ್ತಿ ಗೋಪಾಲ ಕೃಷ್ಣ ವ್ಯಾಸ ಮತ್ತು ವಿರೇಂದರ್ ಕುಮಾರ್ ಮಾಥುರ್ ಹೇಳಿದ್ದಾರೆ.
ರಾಜಸ್ಥಾನ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ 2006 ಜಾರಿಯಾಗುವ ವರೆಗೆ ಈ ನಿಯಮ ಅನ್ವಯವಾಗುತ್ತದೆ ಎಂದಿದೆ ಹೈಕೋರ್ಟ್. ಸದ್ಯ ಈ ವಿಧೇಯಕ ರಾಷ್ಟ್ರಪತಿ ಸಹಿಗಾಗಿ ಕಾಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ
KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ