Rajasthan ‘ಕನ್ಹಯ್ಯ ಜಗಳ’:ಬಿಜೆಪಿಗರಿಗೆ ನಂಟು ಇದೆ: ಗೆಹ್ಲೋಟ್ ಆರೋಪ
ಇಸ್ಲಾಮ್ ನಿಂದಿಸಿದ ಆರೋಪದಲ್ಲಿ ಇಬ್ಬರು ಕನ್ಹಯ್ಯ ಲಾಲ್ ಅವರ ಶಿರಚ್ಛೇದ
Team Udayavani, Nov 13, 2023, 11:31 PM IST
ಜೋಧಪುರ: ಉದಯ್ಪುರದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯ ಆರೋಪಿಗಳಿಗೆ ಬಿಜೆಪಿ ನಂಟಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ನ.25ರಂದು ಚುನಾವಣೆ ಹಿನ್ನೆಲೆಯಲ್ಲಿ ಕನ್ಹಯ್ಯ ಲಾಲ್ ಹತ್ಯೆ ವಿಚಾರ ಪುನಃ ಮುನ್ನೆಲೆಗೆ ಬಂದಿದೆ. ಹೀಗಾಗಿ, ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಜೋಧ್ಪುರದಲ್ಲಿ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್ ” ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಮತ್ತು ಬಿಜೆಪಿ ಗರಿಗೆ ನಂಟು ಇದೆ. ಕಳೆದ ವರ್ಷದ ಜೂ. 28 ರಂದು ಹತ್ಯೆ ಘಟನೆ ನಡೆದ ಬಳಿಕ ಎರಡು-ಮೂರು ಗಂಟೆ ಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬೇರೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಬಿಜೆಪಿ ನಾಯಕರು ತಮ್ಮ ಪ್ರಭಾವ ಬೀರಿ ಪೊಲೀಸರಿಂದ ಬಿಡಿಸಿದ್ದರು. ಈ ಕಾರಣಕ್ಕಾಗಿ ಯೇ ಈ ಪ್ರಕರಣದಲ್ಲಿ ಬಿಜೆಪಿಯು ರಕ್ಷಣಾತ್ಮಕ ನಡೆಯನ್ನು ಅನುಸರಿಸುತ್ತಿದೆ’ ಎಂದು ಟೀಕಿಸಿದ್ದಾರೆ.
ಈಗ ಮಾಹಿತಿಯೇ ಇಲ್ಲ
ಪ್ರಕರಣವನ್ನು ಎನ್ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತು. ಅದರೆ ಅನಂತರ ತನಿಖೆಯ ಪ್ರಗತಿ ಎಲ್ಲಿಗೆ ಬಂತು ಎಂಬುದು ತಿಳಿಯ ಲಿಲ್ಲ. ಈ ಪ್ರಕರಣದಲ್ಲಿ ಎನ್ಐಎ ಕಾಲಹರಣ ಮಾಡುತ್ತಿದೆ’ ಎಂದು ದೂರಿದ್ದಾರೆ. ಇಸ್ಲಾಮ್ ನಿಂದಿಸಿದ ಆರೋಪದಲ್ಲಿ ಇಬ್ಬರು ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ್ದರು.
ಸುಳ್ಳಿನ ಕಂತೆ: ಮುಖ್ಯಮಂತ್ರಿ ಆರೋಪಕ್ಕೆ ತಿರು ಗೇಟು ನೀಡಿದ ಪಶ್ಚಿಮ ರಾಜಸ್ಥಾನ ಬಿಜೆಪಿ ಉಸ್ತು ವಾರಿ ರಾಜೇಂದ್ರ ಗೆಹ್ಲೋಟ್, “ಆರೋಪಿಗಳನ್ನು ಮೊದಲೇ ಪೊಲೀಸರು ಬಂಧಿಸಿದ್ದರೆ, ಅವರನ್ನು ಏಕೆ ಬಿಟ್ಟು ಕಳುಹಿಸಿದರು. ಇದು ರಾಜಸ್ಥಾನ ಸರ ಕಾ ರದ ವೈಫಲ್ಯ. ರಾಜ್ಯ ಸರ ಕಾ ರಕ್ಕೆ ಮೊದಲೇ ಮಾಹಿತಿ ಇತ್ತು ಹಾಗೂ ಪೊಲೀಸರಿಗೂ ಬೆದರಿಕೆಗಳ ಸಂಬಂಧ ದೂರುಗಳನ್ನು ನೀಡಲಾಗಿತ್ತು. ಆದರೂ ಇಂಥ ಘೋರ ಅಪರಾಧ ನಡೆಯಲು ಬಿಟ್ಟರು’ ಎಂದು ದೂರಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ರ್ಯಾಲಿಯಲ್ಲಿ ಹತ್ಯೆ ವಿಚಾರ ಪ್ರಸ್ತಾವಿಸಿದ್ದ ಪ್ರಧಾನಿ “ಕಾಂಗ್ರೆಸ್ಗೆ ಅಪರಾಧಿಗಳ ಬಗ್ಗೆ ಹಾಗೂ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಇದೆ’ ಎಂದು ಟೀಕಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್