ಶಿವಾಜಿ ಮಹಾರಾಜರಿಗೆ ಸೇರಿದ ಹುಲಿಯ ಉಗುರುಗಳನ್ನು ದೇಶಕ್ಕೆ ಮರಳಿ ತರಲು ರಾಜ್ಯಪಾಲರಿಗೆ ವಿನಂತಿ
Team Udayavani, Nov 15, 2020, 3:13 PM IST
ಮುಂಬಯಿ: ಛತ್ರಪತಿ ಶಿವಾಜಿ ಮಹಾರಾಜರಿಗೆ ಸೇರಿದ ಸದ್ಯ ಲಂಡನ್ನಲ್ಲಿರುವ ಅಮೂಲ್ಯ ಜಗದಂಬಾ ವಿಗ್ರಹ ಮತ್ತು ಹುಲಿಯ ಉಗುರುಗಳನ್ನು ಮರಳಿ ತರುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರುವ ಪ್ರಯತ್ನಿಸಿದ್ದ 42ರ ಹರೆಯದ ಬಾಂದ್ರಾ ನಿವಾಸಿ ವಿನೋದ್ ರೋಷನ್ ಡಿಸೋಜಾ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ಛತ್ರಪತಿ ಶಿವಾಜಿ ಮಹಾರಾಜರಿಗೆ ಸೇರಿದ ಅಮೂಲ್ಯ ಜಗದಂಬಾ ವಿಗ್ರಹ ಮತ್ತು ಹುಲಿಯ ಉಗುರುಗಳನ್ನು ಪ್ರಸ್ತುತ ಲಂಡನ್ನ ರಾಯಲ್ ಕಲೆಕ್ಷನ್ ಟ್ರಸ್ಟ್ ಮತ್ತು ವಿಕ್ಟೋರಿಯಾ ಆ್ಯಂಡ್ ಆಲ್ಬರ್ಟ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಈ ಅಮೂಲ್ಯವಾದ ಕಲಾಕೃತಿಗಳನ್ನು ಮಹಾರಾಷ್ಟ್ರಕ್ಕೆ ಮರಳಿ ತರಲು ವಿನಂತಿಸಿದರು.
ನಮ್ಮ ಮನವಿಗೆ ರಾಜ್ಯಪಾಲರು ಬಹಳ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿನೋದ್ ರೋಷನ್ ಡಿಸೋಜಾ ಹೇಳಿದ್ದಾರೆ.