ಕಾನ್ಪುರ 100 ಕೋಟಿ ರೂ ನೋಟುಗಳಿಗೂ ಬೆಂಗಳೂರು ಲಿಂಕ್?
Team Udayavani, Jan 20, 2018, 10:18 AM IST
ಕಾನ್ಪುರ/ಹೊಸದಿಲ್ಲಿ: ಕಾನ್ಪುರ ದಲ್ಲಿ ವಶಪಡಿಸಲಾದ ಅಪಮೌಲ್ಯಗೊಂಡ 100 ಕೋಟಿ ರೂ. ನೋಟುಗಳಿಗೂ ಕರ್ನಾಟಕಕ್ಕೂ ಸಂಬಂಧ ಇದೆಯಾ?ಹೌದು, ಎನ್ನುತ್ತಿದೆ ಈ ವರದಿ.
ಬಲೆಗೆ ಬೀಳುವುದಕ್ಕಿಂತ ಮೊದಲು ಇಡೀ ಜಾಲ ಕರ್ನಾಟಕ ಸಹಿತ 5 ರಾಜ್ಯಗಳಲ್ಲಿ ಕಾರ್ಯಾ ಚರಣೆ ನಡೆಸುತ್ತಿತ್ತು. ಬೆಂಗಳೂರಿನ ಹರಿಕೃಷ್ಣ ಎಂಬಾತ ಅಪಮೌಲ್ಯಗೊಂಡ ನೋಟುಗಳ ಒಟ್ಟು 40%ರಷ್ಟನ್ನು ಬದಲಿಸಿ ಕೊಡುತ್ತೇನೆ ಎಂದು ವಾಗ್ಧಾನ ಮಾಡಿದ್ದ ಎನ್ನಲಾಗಿದೆ. ಬಂಧನಕ್ಕೆ ಒಳಗಾಗಿರುವ 16 ಆರೋಪಿಗಳ ಪೈಕಿ ಒಬ್ಬ ಬಾಯಿಬಿಟ್ಟಿರುವುದಾಗಿ “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಬೆಂಗಳೂರು ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಾನ್ಪುರ ಪೂರ್ವ ವಿಭಾಗದ ಎಸ್ಪಿ ಅನುಗಾರ್ ಆರ್ಯ ತಿಳಿಸಿದ್ದಾರೆ. ಜ. 30ರ ವರೆಗೆ ಅವರು ನ್ಯಾಯಾಂಗ ವಶದಲ್ಲಿರಲಿದ್ದು, ಬಳಿಕ ಬಂಧಿತರನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
“ಸಂಜೀವ್ ಅಗರ್ವಾಲ್, ಮನೀಶ್ ಅಗರ್ವಾಲ್ ಕಮಿಷನ್ ಏಜೆಂಟ್ ಆಗಿ ದ್ದರು. ಹೈದರಾಬಾದ್ನ ಕೋಟೇಶ್ವರ ರಾವ್ ಬೆಂಗಳೂರಿನ ಹರಿಕೃಷ್ಣಗೆ ಕೆಲಸ ಮಾಡುತ್ತಿದ್ದ’ ಎಂದು ಎಸ್ಪಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ