ಭೀಕರ ವರ್ಷ 2020 ಅಲ್ಲ ; 536..! ಒಂದೂವರೆ ವರ್ಷ ಸೂರ್ಯನೇ ಕಾಣಿಸಿರಲಿಲ್ಲವಂತೆ !


Team Udayavani, Apr 27, 2021, 7:30 AM IST

ಭೀಕರ ವರ್ಷ 2020 ಅಲ್ಲ ; 536..! ಒಂದೂವರೆ ವರ್ಷ ಸೂರ್ಯನೇ ಕಾಣಿಸಿರಲಿಲ್ಲವಂತೆ !

ಹೊಸದಿಲ್ಲಿ : ಮನುಕುಲದ ಇತಿಹಾಸದಲ್ಲಿ “ಅತ್ಯಂತ ಕೆಟ್ಟ ವರ್ಷ’ ಯಾವುದು ಎಂಬ ಪ್ರಶ್ನೆಗೆ ಪ್ರಸ್ತುತ ಜನರು ಹೇಗೆ ಉತ್ತರಿಸಬಹುದು? ಕೊರೊನಾ ಕಾರಣದಿಂದ 2020 ಮತ್ತು 2021 ಎಂದು ಉತ್ತರಿಸುವುದು ನಿಸ್ಸಂದೇಹ.

ಆದರೆ ಇದಕ್ಕಿಂತಲೂ ಕಠಿನಾತಿಕಠಿನ ಪರಿಸ್ಥಿತಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿ ಉಳಿದಿದೆ ಎಂದರೆ ನಂಬುತ್ತೀರಾ? ಐರೋಪ್ಯ ಒಕ್ಕೂಟದಲ್ಲಿ ಕ್ರಿಸ್ತಶಕ 536ರಲ್ಲಿ ಭೀಕರ ಜ್ವಾಲಾಮುಖೀ ಸ್ಫೋಟದಿಂದ ಉಂಟಾದ ಅತ್ಯಂತ ಚಳಿ ಮತ್ತು ಪ್ರತಿಕೂಲ ಹವೆಯಿಂದ ಜನರು ಕಂಗೆಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೀವ ಕಳೆದುಕೊಂಡಿದ್ದರು.

ಈ ಬಗ್ಗೆ ಹಾರ್ವರ್ಡ್‌ ವಿ.ವಿ.ಯ ಪ್ರಾಚ್ಯ ಸಂಶೋಧಕ ಮೈಕೆಲ್‌ ಮ್ಯಾಕ್ರೋಮಿಕ್‌ ಐತಿಹಾಸಿಕ ದಾಖಲೆಗಳನ್ನು ಶೋಧಿಸಿದ್ದು, 536ನೇ ಇಸವಿ ಮಾನವ ಇತಿಹಾಸದ “ಅತ್ಯಂತ ಕೆಟ್ಟ ಮತ್ತು ಕಠಿನ ವರ್ಷ’ ಎಂದು ಘೋಷಿಸಿದ್ದಾರೆ. ಜ್ವಾಲಾಮುಖೀಯಿಂದ ಹೊರಬಂದ ಹೊಗೆಯಿಂದಾಗಿ ಸೂರ್ಯನ ಬೆಳಕು ಭೂಮಿಗೆ ತಲುಪದಂಥ ಸ್ಥಿತಿ ಉಂಟಾಗಿತ್ತು. ಇದರಿಂದ ಐರೋಪ್ಯ ಒಕ್ಕೂಟ, ಮಧ್ಯಪ್ರಾಚ್ಯ, ಚೀನ ಮತ್ತು ಏಷ್ಯಾದ ಹಲವು ಭಾಗಗಳಲ್ಲಿ ಜನರು ಒಂದೂವರೆ ವರ್ಷ ಕಾಲ ಹಗಲು -ರಾತ್ರಿ ಯಾವುದು ಎಂದು ಗೊತ್ತಾಗದ ಸ್ಥಿತಿಯಲ್ಲಿದ್ದರು.

“ದ ಬೈಝಾಂಟೈನ್‌ ಹಿಸ್ಟಾರಿಯನ್‌ ಪ್ರೊಕೋಪಿಯಸ್‌’ನಲ್ಲಿ ಈ ಅಂಶ ಕಣ್ಣಿಗೆ ಕಟ್ಟಿದಂತೆ ದಾಖಲಾಗಿದೆ ಎಂಬುದನ್ನು ಮ್ಯಾಕ್ರೋಮಿಕ್‌ ಹುಡುಕಿ ತೆಗೆದಿದ್ದಾರೆ.

ಬೆಳೆ ನಷ್ಟ
ಈ ಪ್ರತಿಕೂಲ ಹವಾಮಾನದಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗದೆ, ಆಹಾರಕ್ಕಾಗಿ ಹಾಹಾಕಾರ ಉಂಟಾಗಿತ್ತು. ಐರ್ಲೆಂಡ್‌ನ‌ ಆ ಕಾಲದ ಧಾರ್ಮಿಕ ಮುಖಂಡರು ಕ್ರಿಸ್ತಶಕ 536ರಿಂದ 539ರ ವರೆಗೆ ಆಹಾರ ಉತ್ಪಾದನೆ ಮಾಡಲು ಸಾಧ್ಯವಾಗದ ವರ್ಷಗಳು ಎಂದು ಬಣ್ಣಿಸಿರುವುದು ದಾಖಲಾಗಿದೆ.

ಮಾದರಿ ಪರಿಶೀಲನೆ
ಜಗತ್ತಿನ ಹಲವು ಭಾಗಗಳಿಂದ ಸಂಗ್ರ ಹಿಸ ಲಾಗಿರುವ ಮಂಜುಗಡ್ಡೆಯ ಮಾದರಿ ಗಳನ್ನು ಸಂಶೋಧಕರು ಪರಿ ಶೀಲನೆ ನಡೆಸಿ ದ್ದಾರೆ. ಕ್ರಿಸ್ತಶಕ 536ರಲ್ಲಿ ಇದ್ದ ಪ್ರತಿ ಕೂಲ ಹವಾಮಾನದ ಬಗ್ಗೆ ಅಧ್ಯ ಯನ ನಡೆಸಿ ದ್ದಾರೆ. 2,300 ವರ್ಷ ಗಳಲ್ಲಿಯೇ ಅದು ಅತ್ಯಂತ ಕನಿಷ್ಠ ತಾಪದ ವರ್ಷವೆಂದು ದಾಖಲಾಗಿದೆ. ಈ ಅವಧಿಯಲ್ಲಿ ಬರಗಾಲ, ಹಸಿವು, ದುಃಖದ ಅತ್ಯಂತ ಕಠಿನ ಪರಿಸ್ಥಿತಿಯನ್ನು ಜನರು ಎದುರಿಸಿದ್ದರು ಎಂದು ಅಧ್ಯಯನದಿಂದ ತಿಳಿದುಕೊಳ್ಳಲಾಗಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.