ದಿನಕ್ಕೊಂದು ಬಾರಿ ಮಾತ್ರ ಧ್ವನಿವರ್ಧಕದಲ್ಲಿ ಅಝಾನ್: ಕೇರಳ ಮಸೀದಿ
Team Udayavani, Jun 15, 2017, 4:11 PM IST
ಕೊಚ್ಚಿ : ಶಬ್ದ ಮಾಲಿನ್ಯದ ದೂರುಗಳು ಹೆಚ್ಚುತ್ತಿರುವುದನ್ನು ಅನುಸರಿಸಿ ಕೇರಳದ ಮುಸ್ಲಿಂ ಬಹುಸಂಖ್ಯಾಕ ಮಲಪ್ಪುರಂ ಜಿಲ್ಲೆಯ ಪ್ರಮುಖ ಮಸೀದಿಯೊಂದು ಈಗ ಸಾಗುತ್ತಿರುವ ಪವಿತ್ರ ರಮ್ಜಾನ್ ತಿಂಗಳಲ್ಲಿ ದಿನಕ್ಕೆ ಒಂದು ಬಾರಿ ಮಾತ್ರವೇ ಧ್ವನಿ ವರ್ಧಕದ ಮೂಲಕ ಅಝಾನ್ ಬಿತ್ತರಿಸಲು ನಿರ್ಧರಿಸಿದೆ.
ಮಲಪ್ಪುರಂ ಜಿಲ್ಲೆಯ ವಳಕ್ಕಾಡ್ ಪ್ರದೇಶದಲ್ಲಿನ ಅತೀ ದೊಡ್ಡ ವಾಲಿಯಾ ಜುಮ್ಮಾ ಮಸೀದಿಯು ದಿನಕ್ಕೆ ಒಂದು ಬಾರಿ ಮಾತ್ರವೇ ಧ್ವನಿ ವರ್ಧಕದ ಮೂಲಕ ಅಝಾನ್ ಬಿತ್ತರಿಸಲು ನಿರ್ಧರಿಸಿದ್ದು ಇದನ್ನು ಸುತ್ತಮುತ್ತಲಿನ ಇತರ 17 ಸಣ್ಣ ಮಸೀದಿಗಳು ಅನುಸರಿಸಲಿವೆ ಮತ್ತು ಆ ಮೂಲಕ ಯಾವುದೇ ಸದ್ದು-ಗದ್ದಲ ಆಗದಂತೆ ಸಹಕರಿಸಲು ನಿರ್ಧರಿಸಿವೆ ಎಂದು ಹಿಂದುಸ್ಥಾನ್ ಟೈಮ್ಸ್ ಇಂದು ಗುರುವಾರ ವರದಿ ಮಾಡಿದೆ.
ಈ ಮಸೀದಿಗಳ ಸಮಿತಿಯ ಸದಸ್ಯರ ಈಚಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಮಾತ್ರವಲ್ಲದೆ ಮಸೀದಿಯ ಉಳಿದೆಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಲು ಕೂಡ ನಿರ್ಧರಿಸಿತು.
ಸಭೆಯಲ್ಲಿ ಮೊದಲು ಅನೇಕರು ಈ ನಿರ್ಧಾರವನ್ನು ವಿರೋಧಿಸಿದರು. ಆದರೆ ಸಮೀಪದ ಶಾಲೆಗಳು ಮತ್ತು ಆಸ್ಪತ್ರೆಗಳಿಂದ ಧ್ವನಿ ವರ್ಧಕಗಳ ಬಳಕೆ ವಿರುದ್ಧ ದೂರುಗಳು ಬಂದಿರುವುದನ್ನು ಲೆಕ್ಕಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಮಹಲ್ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಅಜೀಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ
Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ
Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್
Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ
Panaji: ಪಕ್ಷ ಅವಕಾಶ ನೀಡಿದರೆ ಸ್ಥಳೀಯ ರಾಜಕಾರಣಕ್ಕೆ ಬರಲು ಸಿದ್ಧ: ಶ್ರೀಪಾದ್ ನಾಯ್ಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.