ನೋಟು ಅಮಾನ್ಯ: ಆರ್ಬಿಐ ಮತ್ವಾಲಾ ಬಂದರ್ ಎಂದ ಶಿವಸೇನೆ
Team Udayavani, Aug 31, 2018, 3:28 PM IST
ಮುಂಬಯಿ: ನೋಟು ಅಮಾನ್ಯ ಕುರಿತಾದ ಆರ್ಬಿಐ ವರದಿಯನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯ ಮುಖವಾಣಿ ಸಾಮನಾ, “ನೋಟು ಅಮಾನ್ಯವು ಸರಕಾರದ ಒಂದು ಭಾರೀ ದೊಡ್ಡ ಸೋಲಿನ ಕ್ರಮವಾಗಿದ್ದು ಆರ್ಬಿಐ ತಾನು ಬಯಸಿದ್ದನ್ನು ಮಾಡುವ ಮಂಗನಂತಾಗಿದೆ (ಮತ್ವಾಲಾ ಬಂದರ್)’ ಎಂದು ಹೇಳಿದೆ.
ಆರ್ಬಿಐ ತನ್ನ 2017-18ರ ಸಾಲಿನ ವಾರ್ಷಿಕ ವರದಿಯಲ್ಲಿ ಅಮಾನ್ಯಗೊಳಿಸಲಾದ 500 ಮತ್ತು 1,000 ರೂ. ನೋಟುಗಳ ಶೇ.99.3 ಪ್ರಮಾಣದ ನೋಟುಗಳು ಬ್ಯಾಂಕ್ ವ್ಯವಸ್ಥೆಗೆ ಮರಳಿ ಬಂದಿವೆ ಎಂದು ತಿಳಿಸಿತ್ತು.
ನೋಟು ಅಮಾನ್ಯ ಕ್ರಮವನ್ನು ಭಾರೀ ದೊಡ್ಡ ಸೋಲೆಂದು ಟೀಕಿಸಿದ ಶಿವಸೇನೆ, ದೇಶದ ಆರ್ಥಿಕತೆಯ ಪಾಲಕನಾಗಿರುವ ಹೊರತಾಗಿಯೂ ಆರ್ಬಿಐ ನಿರ್ಧಾರಗಳು ಮಂಗನ ನಿರ್ಧಾರದಂತಾಗಿದೆ’ ಎಂದು ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ