ರಾಹುಲ್ “ಚೈನೀಸ್ ಗಾಂಧಿ’!
Team Udayavani, Sep 1, 2018, 6:00 AM IST
ನವದೆಹಲಿ: “”ರಾಹುಲ್ ಗಾಂಧಿ ಚೀನಾದ ಪ್ರತಿನಿಧಿ ಎಂಬಂತೆ ನಟಿಸುತ್ತಿದ್ದಾರೆ. ಅವರಿಗೆ ಭಾರತಕ್ಕಿಂತಲೂ ಚೀನಾ ಮೇಲೆ ಹೆಚ್ಚು. ಹಾಗಾಗಿ ಪ್ರತಿಯೊಂದು ಭಾಷಣದಲ್ಲಿಯೂ ಚೀನಾ ಬಗ್ಗೆ ಪ್ರಸ್ತಾಪಿಸುತ್ತಾರೆ. ಅವರು ಮಾನಸಸರೋವರ ಯಾತ್ರೆಯ ನೆಪ ಹೇಳಿ, ನೇಪಾಳ ಮೂಲಕ ಚೀನಾಕ್ಕೆ ಹೋಗಲು ಮುಂದಾಗಿದ್ದಾರೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ. ಅವರೀಗ “”ಚೈನೀಸ್ ಗಾಂಧಿ” ಎಂದೂ ಲೇವಡಿ ಮಾಡಿದ್ದಾರೆ.
ಶುಕ್ರವಾರ ಮಾತನಾಡಿದ ಪಾತ್ರಾ, “”ಪ್ರಜಾಪ್ರಭುತ್ವದ ಬಗ್ಗೆ ಭಾರತವು ಚೀನಾವನ್ನು ನೋಡಿ ಕಲಿತುಕೊಳ್ಳಬೇಕೆಂದು ರಾಹುಲ್ ಹೇಳುತ್ತಾರೆ. ಅದ್ಯಾಕೆ ಅವರಿಗೆ ಚೀನಾ ಮೇಲೆ ಅಪಾರ ಪ್ರೀತಿ? ರಾಹುಲ್ ನೇಪಾಳ ಮಾರ್ಗವಾಗಿ ಚೀನಾಕ್ಕೆ ತೆರಳುತ್ತಿದ್ದಾರೆ. ಬೀಜಿಂಗ್ನಲ್ಲಿ ಅವರು ಯಾರನ್ನು ಭೇಟಿ ಮಾಡಲು ತೆರಳುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
“”ನೇಪಾಳ ತಲುಪಿದ “ಶಿವಭಕ್ತ’: ರಾಹುಲ್ ಶುಕ್ರವಾರ ಯಾತ್ರೆ ಆರಂಭಿಸಿದ್ದು, ನೇಪಾಳ ತಲುಪಿದ್ದಾರೆ. 12 ದಿನಗಳ ಯಾತ್ರೆಯಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ.
ಪೈಲಟ್ನದ್ದೇ ತಪ್ಪು
ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಏ.26ರಂದು ಹುಬ್ಬಳ್ಳಿಯಲ್ಲಿ ರಾಹುಲ್ ಅವರಿದ್ದ ವಿಮಾನದಲ್ಲಿ ದೋಷ ಕಾಣಿಸಿಕೊಂಡ ಪ್ರಕರಣ ಸಂಬಂಧ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸಲ್ಲಿಸಿರುವ ತನಿಖಾ ವರದಿಯ ಮಾಹಿತಿ ಹೊರಬಿದ್ದಿದೆ. “ವಿಮಾನ ಆಟೋಪೈಲಟ್ ಮೋಡ್ನಲ್ಲಿದ್ದಾಗ ಉಂಟಾದ ದೋಷವೇ ಅಂದಿನ ಘಟನೆಗೆ ಕಾರಣ. ಆದರೆ, ದೋಷ ಕಂಡುಬಂದ ಕೂಡಲೇ ಪೈಲಟ್ ಅದನ್ನು ಸರಿಪಡಿಸಲಿಲ್ಲ. ಎಚ್ಚರಿಕೆ ಸಂದೇಶ ಬಂದ 15 ಸೆಕೆಂಡುಗಳ ಬಳಿಕ ಪೈಲಟ್ ಕ್ರಮ ಕೈಗೊಂಡಿದ್ದು, ಅವರು ಮಾಡಿದ ವಿಳಂಬವೇ ಘಟನೆಗೆ ಕಾರಣ. ನಂತರ ವಿಮಾನವನ್ನು ನಿಯಂತ್ರಣಕ್ಕೆ ತರಲು ಪೈಲಟ್ಗೆ 24 ಸೆಕೆಂಡುಗಳೇ ಬೇಕಾಯಿತು ಆದರೆ, ಇದರಲ್ಲಿ ಯಾವುದೇ ಸಂಚು ಇಲ್ಲ’ ಎಂದು ವರದಿ ತಿಳಿಸಿದೆ. ಜತೆಗೆ, ಅದಕ್ಕೂ ಮೊದಲು ವಿಮಾನದಲ್ಲಿ ಯಾವುದೇ ಲೋಪವಾಗಲೀ, ತಾಂತ್ರಿಕ ದೋಷವಾಗಲೀ ಇರಲಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ