ಸಿಕಾರ್ ದೇವಾಲಯದ ಹೊರಗೆ ಕಾಲ್ತುಳಿತ ; ಪ್ರಧಾನಿ ಮೋದಿ, ಸಿಎಂ ಅಶೋಕ್ ವಿಷಾದ
Team Udayavani, Aug 8, 2022, 2:27 PM IST
ಸಿಕಾರ್ : ರಾಜಸ್ಥಾನದ ದೇವಾಲಯದ ಹೊರಗೆ ಕಾಲ್ತುಳಿತ ಸಂಭವಿಸಿ 3 ಮಂದಿ ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಅವಘಡ ಸೋಮವಾರ ಸಂಭವಿಸಿದೆ.
ಖಟು ಶ್ಯಾಮ್ ಜಿ ದೇವಾಲಯದಲ್ಲಿ ಶ್ರಾವಣ ತಿಂಗಳ ಸೋಮವಾರ ವಿಶೇಷ ಪೂಜೆಯ ವೇಳೆ ಅವಘಡ ಸಂಭವಿಸಿದ್ದು, ಮೃತಪಟ್ಟವರು ಮೂವರೂ ಮಹಿಳೆಯರು ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು 115 ಕಿ.ಮೀ ದೂರವಿರುವ ರಾಜ್ಯ ರಾಜಧಾನಿ ಜೈಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ವಿಷಾದ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. ಮೃತ ಪಟ್ಟವರ ಕುಟುಂಬದೊಂದಿಗೆ ಸರಕಾರ ನಿಲ್ಲಲಿದೆ ಎಂದು ಹೇಳಿದ್ದಾರೆ.