ರೈಲು ವಿಳಂಬವಾದರೆ ಪರಿಹಾರ
ತೇಜಸ್ ಎಕ್ಸ್ಪ್ರೆಸ್ ರೈಲು ಯಾನಿಗಳಿಗೆ ಹೊಸ ಕೊಡುಗೆ
Team Udayavani, Oct 1, 2019, 8:59 PM IST
ದಿಲ್ಲಿ ಮತ್ತು ಜಮ್ಮುವಿನ ಕತ್ರಾ ನಡುವೆ ಓಡಾಟ ನಡೆಸಲಿರುವ 2ನೇ ವಂದೇ ಮಾತರಂ ರೈಲಿನ ಒಳಗಿನ ನೋಟ. ಈ ರೈಲು. ಅ.5ರಿಂದ ಓಡಾಡಲಿದೆ.
ಒಂದು ಗಂಟೆ ವಿಳಂಬವಾದರೆ 100 ರೂ. ಪರಿಹಾರ
ಎರಡು ಗಂಟೆ ವಿಳಂಬವಾದರೆ 250 ರೂ. ಪರಿಹಾರ
ಹೊಸದಿಲ್ಲಿ: ಕೆಲವು ಪ್ರದೇಶಗಳಲ್ಲಿ ರೈಲು ವಿಳಂಬವಾಗಿ ಬರುವುದು ಮತ್ತು ತಲುಪುವುದು ಸಾಮಾನ್ಯ. ಆದರೆ ಇನ್ನು ಮುಂದೆ ರೈಲು ವಿಳಂಬವಾದರೆ ಪ್ರಯಾಣಿಕರಿಗೆ ಲಾಭವಾಗಲಿದೆ. ಹೌದು ಭಾರತೀಯ ರೈಲ್ವೇಯ ಸಹಸಂಸ್ಥೆಯಾಗಿರುವ ಐಆರ್ಸಿಟಿಸಿ ಈ ಯೋಜನೆಯನ್ನು ಪ್ರಕಟಿಸಿದೆ. ಇದು ತೇಜಸ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಮೊದಲಿಗೆ ಜಾರಿಗೆ ಬರಲಿದೆ.
ರೈಲು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬ ವಾದರೆ ಪ್ರಯಾಣಿಕರಿಗೆ 100 ರೂ. ಪರಿಹಾರ ಸಿಗಲಿದೆ. ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ವಿಳಂಬವಾದರೆ 250 ರೂ. ಪರಿಹಾರ ನೀಡಲಾಗುತ್ತದೆ ಎಂದು ರೈಲ್ವೇ ತಿಳಿಸಿದೆ.ಈಗಾಗಲೇ ಈ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಸ್ಥೆ 25 ಲಕ್ಷ ರೂ.ಗಳ ವಿಮೆ ಒದಗಿಸುತ್ತಿದೆ. ಇದರ ಜತೆಗೆ ಹೆಚ್ಚುವರಿಯಾಗಿ ಹೊಸ ಯೋಜನೆ ಪ್ರಕಟಿಸಲಾಗಿದೆ.
ವಿಶೇಷ ಎಂದರೆ 25 ಲಕ್ಷ ರೂ.ಗಳ ಟ್ರಾವೆಲ್ ಇನ್ಶೂರೆನ್ಸ್ನಲ್ಲಿ ಮನೆಯಿಂದ ಕಳವು ಸಂಭವಿಸಿದರೂ ಅದಕ್ಕೆ ಪರಿಹಾರ ಸಿಗಲಿದೆ. ರೈಲಿನಲ್ಲಿ ಪ್ರಯಾಣದಲ್ಲಿರುವವರ ಮನೆಗೆ ಕಳ್ಳರು ನುಗ್ಗಿ ದೋಚಿದರೆ ಒಂದು ಲಕ್ಷ ರೂ.ಗಳ ಪರಿಹಾರವೂ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ