ನಾಪತ್ತೆಯಾಗಿದ್ದ ಬಿ.ಎಸ್.ಎಫ್. ಯೋಧನ ಮೃತದೇಹ ಪಾಕ್ ನೆಲದಲ್ಲಿ ಪತ್ತೆ
Team Udayavani, Oct 1, 2019, 9:39 PM IST
ಶ್ರೀನಗರ: ಸೆಪ್ವಂಬರ್ 28ರಂದು ಭಾರತ ಪಾಕಿಸ್ಥಾನ ಗಡಿನಿಯಂತ್ರಣ ರೇಖೆ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧರೊಬ್ಬರ ಮೃತದೇಹ ಇಂದು ಪಾಕಿಸ್ಥಾನದ ಭೂಪ್ರದೇಶದಲ್ಲಿ ಪತ್ತೆಯಾಗಿದೆ.
ಬಿ.ಎಸ್.ಎಫ್. ಸಬ್ ಇನ್ ಸ್ಪೆಕ್ಟರ್ ಪಾರಿತೋಷ್ ಮೊಂಡಲ್ ಅವರು ಜಮ್ಮು ಜಿಲ್ಲೆಯ ರಣಬೀರ್ ಸಿಂಗ್ ಪೂರ ಪ್ರದೇಶದ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅಯ್ಕ್ ನಲ್ಲಾ ನದಿ ಪ್ರದೇಶದಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
ಬಳಿಕ ಇಂದು ಅವರ ಮೃತದೇಹ ಪಾಕಿಸ್ಥಾನ ಕಡೆಯಲ್ಲಿ ನದಿಯಿಂದ ಮೇಲೆತ್ತಲಾಗಿದೆ ಎಂದು ತಿಳಿದುಬಂದಿದೆ. ಗಸ್ತು ಕರ್ತವ್ಯ ಸಂದರ್ಭದಲ್ಲಿ ಪಾರಿತೋಷ್ ಅವರು ನದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರಬೇಕೆಂದು ಇದೀಗ ಶಂಕಿಸಲಾಗುತ್ತಿದೆ.
ಸಬ್ ಇನ್ ಸ್ಪೆಕ್ಟರ್ ಪಾರಿತೋಷ್ ಮೊಂಡಲ್ ಅವರು ಪಶ್ಚಿಮ ಬಂಗಾಲದ ನಾಡಿಯ ಜಿಲ್ಲೆಗೆ ಸೇರಿದವರಾಗಿದ್ದಾರೆ. ಪಾರಿತೋಷ್ ಅವರ ಪತ್ತೆಗೆ ಬಿ.ಎಸ್.ಎಫ್. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದವು ಹಾಗೂ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಈ ಕಾರ್ಯಾಚರಣೆಗೆ ಪಾಕಿಸ್ಥಾನಿ ರೇಂಜರ್ ಗಳು ಹಾಗೂ ಸ್ಥಳೀಯರೂ ಸಹ ಕೈಜೊಡಿಸಿದ್ದರು.
ಅಯ್ಕ್ ನಲ್ಲಾ ನದಿಯು ಭಾರತದಿಂದ ಪಾಕಿಸ್ಥಾನದತ್ತ ಹರಿಯುತ್ತದೆ ಮತ್ತು ಮಳೆಗಾಲದ ಸಂದರ್ಭದಲ್ಲಿ ಈ ನದಿಯು ಕೆಲವೊಮ್ಮೆ ಭೋರ್ಗರೆದು ಹರಿಯುತ್ತಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ