ಬಿಡುಗಡೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾ
Team Udayavani, Mar 2, 2019, 12:30 AM IST
ಪಾಕಿಸ್ಥಾನದ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ರನ್ನು ಭಾರತಕ್ಕೆ ಹಸ್ತಾಂತರಿಸಬಾರದು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಶುಕ್ರವಾರ ಬೆಳಗ್ಗೆ ಇಸ್ಲಾಮಾಬಾದ್ ಹೈಕೋರ್ಟ್ ವಜಾ ಮಾಡಿತ್ತು. ಪಾಕಿಸ್ತಾನಿ ನಾಗರಿಕರೊಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದರು. ಅಭಿನಂದನ್ ನಮ್ಮ ದೇಶಕ್ಕೆ ಕೆಡುಕು ಮಾಡಲು ಬಂದಿದ್ದರು. ವಾಯುಗಡಿ ಉಲ್ಲಂ ಸಿ ಬಂದಿದ್ದ ಅವರನ್ನು ಇಲ್ಲೇ ಸೆರೆಯಲ್ಲಿ ಇರಿಸಿ, ಇಲ್ಲೇ ಶಿಕ್ಷೆಗೆ ಗುರಿಪಡಿಸಬೇಕು. ಅವರ ಬಿಡುಗಡೆಗೆ ತಡೆ ತರಬೇಕು ಎಂದು ಅರ್ಜಿದಾರರು ಕೇಳಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯ ವಿಚಾರಣೆಗೇ ನಿರಾಕರಿಸಿ, ಅರ್ಜಿ ವಜಾ ಮಾಡಿತು.
ನಮ್ಮ ಶತ್ರುಗಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ, ವಿಂಗ್ಕಮಾಂಡರ್ ಅಭಿನಂದನ್ ವರ್ಧಮಾನ್ ಮತ್ತೆ ಸ್ವದೇಶಕ್ಕೆ ವಾಪಸಾಗಿದ್ದಾರೆ. ಹೆಮ್ಮೆಯ ಯೋಧನಿಗೆ ಆತ್ಮೀಯ ಸ್ವಾಗತ.
ಮೋಹನ್ ಭಾಗವತ್, ಆರ್ಎಸ್ಎಸ್ ಮುಖ್ಯಸ್ಥ
ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದ್ದು ಸಂತೋಷ ತಂದಿದೆ. ಅವರನ್ನು ಈಗ ಸಮಗ್ರ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯುತ್ತೇವೆ.
ಏರ್ ವೈಸ್ ಮಾರ್ಷಲ್ ಆರ್.ಜಿ.ಕೆ.ಕಪೂರ್, ಐಎಎಫ್ ಉಪ ಮುಖ್ಯಸ್ಥ
ಕೇಂದ್ರ ಸರಕಾರದ ಸಮರ್ಥ ರಾಜತಾಂತ್ರಿಕ ನಡೆಗಳ ಪರಿಣಾಮದಿಂದ ಅಭಿನಂದನ್ ಬಿಡುಗಡೆಯಾಗಿದೆ. ಅನೇಕ ರಾಷ್ಟ್ರ ಗಳ ಜತೆಗೆ ಭಾರತ ಬಾಂಧವ್ಯ ವೃದ್ಧಿಸಿರುವುದು ಅನುಕೂಲವಾಗಿದೆ.
ಸುಮಿತ್ರಾ ಮಹಾಜನ್, ಲೋಕಸಭೆ ಸ್ಪೀಕರ್
ವಿಂಗ್ ಕಮಾಂಡರ್ ಅಭಿನಂದನ್ ಅವರೇ, ನಿಮ್ಮ ಘನತೆ, ಪರಾಕ್ರಮ ಹಾಗೂ ಶೌರ್ಯವು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ದೇಶಕ್ಕೆ ನಿಮಗಿದೋ ಪ್ರೀತಿಯ ಸ್ವಾಗತ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ