ಇಂದಿಗೂ ಕಾಡುತ್ತಿದೆ ಮುಂಬಯಿ ದಾಳಿ
Team Udayavani, Sep 30, 2019, 5:43 AM IST
ಐಎನ್ಎಸ್ ವಿಕ್ರಮಾದಿತ್ಯ (ಪಶ್ಚಿಮ ಕರಾವಳಿ): 2008ರಲ್ಲಿ ನಡೆದಿದ್ದ ಮುಂಬಯಿ ದಾಳಿಯ ಕರಾಳ ನೆನಪು ಈಗಲೂ ದೇಶವನ್ನು ಕಾಡುತ್ತಿದೆ ಎಂದಿ ದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್. ಐಎನ್ಎಸ್ ವಿಕ್ರಮಾದಿತ್ಯ ಜಲಾಂತರ್ಗಾಮಿಯಲ್ಲಿ ಶನಿವಾರ ರಾತ್ರಿ ತಂಗಿದ್ದ ಅವರು, ರವಿವಾರ ಅದರಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ ದಲ್ಲಿಯೇ ಪತ್ರಕರ್ತರೊಂದಿಗೆ ಮಾತನಾಡಿದರು.
ಸಣ್ಣ ನಿರ್ಲಕ್ಷ್ಯದಿಂದ ಆದ ಅತಿದೊಡ್ಡ ಪ್ರಮಾದ ಮುಂಬಯಿ ದಾಳಿ. ಅಂಥ ನಿರ್ಲಕ್ಷ್ಯಗಳನ್ನು ಮತ್ತೆ ಮಾಡುವ ಹಾಗಿಲ್ಲ. ಹೀಗಾಗಿ ನೌಕಾಪಡೆ, ಹಗಲಿ ರುಳೆನ್ನದೆ ಕರಾವಳಿ ತೀರವನ್ನು ಕಟ್ಟೆಚ್ಚರ ದಿಂದ ಕಾಯುತ್ತಿದೆ’ ಎಂದಿದ್ದಾರೆ ರಾಜನಾಥ್ ಸಿಂಗ್.
ಪಾಕಿಸ್ಥಾನವನ್ನು ಪರೋಕ್ಷವಾಗಿ ಪ್ರಸ್ತಾ ಪಿಸಿದ ಅವರು, “ನಮ್ಮ ನೆರೆಯ ದೇಶವೊಂದು ಭಾರತವನ್ನು ಘಾಸಿಗೊಳಿ ಸಲು, ಒಡೆಯಲು ಹೊಂಚು ಹಾಕು ತ್ತಲೇ ಇದೆ. ಆದರೆ, ಆ ದೇಶದ ಪ್ರತಿಯೊಂದು ದಾಳಿಯನ್ನು ಸಮರ್ಥ ವಾಗಿ ಎದುರಿಸುವ ಶಕ್ತಿ ಭಾರತಕ್ಕಿದೆ. ಸಾಗರದ ಮೂಲಕ ಆಗುವ ದಾಳಿಗಳನ್ನು ಹಿಮ್ಮೆಟ್ಟಿಸಲು ಭಾರತೀಯ ನೌಕಾಪಡೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ” ಎಂದರು.
ಇದೇ ವೇಳೆ, ಬಾಲಾಕೋಟ್ನಲ್ಲಿ ಮತ್ತೆ ಉಗ್ರರ ತರಬೇತಿ ಶಿಬಿರ ತಲೆ ಎತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಇತ್ತೀಚೆಗೆ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, “”ಮತ್ತೆ ತಲೆಯೆತ್ತುವ ಉಗ್ರವಾದಿಗಳಿಗೆ ಎಂಥಾ ಶಾಸ್ತಿಯಾಗುತ್ತೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ